Advertisement

ಸಜೀಪಮುನ್ನೂರು: ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಸಭೆ

11:42 AM Apr 19, 2018 | |

ಬಂಟ್ವಾಳ : ದ.ಕ. ಜಿಲ್ಲಾ ರೈತ ಸಂಘ, ಹಸಿರು ಸೇನೆ, ಬಂಟ್ವಾಳ ತಾಲೂಕು ಘಟಕ ಹಾಗೂ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಸಭೆಯು ಸಜೀಪಮುನ್ನೂರುನಲ್ಲಿ ಮನೋಹರ್‌ ಶೆಟ್ಟಿ ನಡಿಕಂಬಳಗುತ್ತು ಅಧ್ಯಕ್ಷತೆಯಲ್ಲಿ ಜರಗಿತು.

Advertisement

ನೂತನ ತುಂಬೆ ಡ್ಯಾಂನಲ್ಲಿ 3 ತಿಂಗಳಿಂದ 6 ಮೀ. ನೀರು ಸಂಗ್ರಹಿಸಿ ರೈತರಿಗೆ ಯಾವುದೇ ರೀತಿಯಲ್ಲಿ ನೆಲಬಾಡಿಗೆ/ ಶಾಶ್ವತ ಪರಿಹಾರ ನೀಡದ ಜಿಲ್ಲಾಡಳಿತದ ರೈತ ವಿರೋಧಿ ನೀತಿಯ ಬಗ್ಗೆ ಸಂಬಂಧಿಸಿದ ಎಲ್ಲ ಜನ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಲಿಖೀತ ಮನವಿ ನೀಡಿದ್ದು, ಈ ತನಕ ಯಾವುದೇ ಕ್ರಮಕೈಗೊಳ್ಳದಿರುವುದರಿಂದ ಸೂಕ್ತ ಪರಿಹಾರ ಕೂಡಲೇ ವ್ಯವಸ್ಥೆ ಮಾಡದಿದ್ದಲ್ಲಿ ಕಾನೂನು ಹೋರಾಟ ನಡೆಸಲು ಸಭೆ ಸರ್ವಾನುಮತದಿಂದ ತೀರ್ಮಾನಿಸಿತು.

ಇದೇ ಸಂದರ್ಭದಲ್ಲಿ ಆರ್‌ಟಿಐ ಕಾರ್ಯಕರ್ತ ಮತ್ತು ತಾಲೂಕು ರೈತ ಸಂಘ ಅಧ್ಯಕ್ಷ ದಿ| ಶರತ್‌ ಕುಮಾರ್‌ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್‌, ಪದಾಧಿಕಾರಿಗಳಾದ ಎನ್‌.ಕೆ. ಇದಿನಬ್ಬ, ಪಿ. ಸುದೇಶ್‌ ಮಯ್ಯ, ಶೇಕಬ್ಬ, ಅಬ್ದುಲ್‌ ರಹಿಮಾನ್‌, ರಾಬರ್ಟ್‌ ಡಿ’ಸೋಜಾ, ದೇವರಾಜ ರೈ, ಶರತ್‌ ಕುಮಾರ್‌ ಶೆಟ್ಟಿ, ರಂಜನಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next