Advertisement

ಬ್ರಹ್ಮೋಸ್‌ ಕ್ಷಿಪಣಿ ಸಿಡಿದ ಪ್ರಕರಣ: ಮೂವರು ಅಧಿಕಾರಿಗಳು ವಜಾ

10:19 PM Aug 23, 2022 | Team Udayavani |

ನವದೆಹಲಿ:ಪಾಕಿಸ್ತಾನ ಗಡಿಯತ್ತ ಆಕಸ್ಮಿಕವಾಗಿ ಬ್ರಹ್ಮೋಸ್‌ ಕ್ಷಿಪಣಿ ಸಿಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆಯ ಮೂವರು ಅಧಿಕಾರಿಗಳನ್ನು ವಜಾ ಮಾಡಲಾಗಿದೆ.

Advertisement

ಮಾ.9ರಂದು ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ನಡೆಸಲಾಗಿದ್ದ ಕೋರ್ಟ್‌ ಆಫ್ ಎನ್‌ಕ್ವಯರಿ ಮುಕ್ತಾಯಗೊಂಡ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಮತ್ತು ತಕ್ಷಣದಿಂದಲೇ ಈ ನಿರ್ಧಾರ ಜಾರಿಗೆ ಬರಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ವಜಾಗೊಂಡಿರುವ ಅಧಿಕಾರಿಗಳ ಹೆಸರು, ಹುದ್ದೆ ಮತ್ತು ಅವರ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ತಾಂತ್ರಿಕ ಕಾರಣದಿಂದಾಗಿ ಹೀಗಾಗಿತ್ತು ಎಂದು ಪಾಕಿಸ್ತಾನ ಸರ್ಕಾರಕ್ಕೆ ಕೇಂದ್ರ ಮಾಹಿತಿ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next