Advertisement

ಎನ್‌ಕೌಂಟರ್‌ನಲ್ಲಿ ಮೂವರು ಹಿಜ್ಬುಲ್‌ ಉಗ್ರರ ಹತ್ಯೆ

10:20 AM Jan 22, 2020 | Team Udayavani |

ಶ್ರೀನಗರ/ವಾರಾಣಸಿ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಹಿಜ್ಬುಲ್‌ ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಹತ ಉಗ್ರರಲ್ಲಿ ಒಬ್ಬನಾದ ಆದಿಲ್‌ ಅಹ್ಮದ್‌, ಈ ಹಿಂದೆ ವಿಶೇಷ ಪೊಲೀಸ್‌ ಅಧಿಕಾರಿಯಾಗಿ ಕಾರ್ಯನಿರ್ವ ಹಿಸುತ್ತಿದ್ದ. 2018ರಲ್ಲಿ 7 ಎಕೆ 47 ರೈಫ‌ಲ್‌ಕದ್ದುಕೊಂಡು ಹೋಗಿ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದ.

Advertisement

ಐಎಸ್‌ಐ ಏಜೆಂಟ್‌ ಸೆರೆ: ಮತ್ತೂಂದು ಪ್ರಕರಣದಲ್ಲಿ, ಪಾಕ್‌ ಐಎಸ್‌ಐಗೆ ಮಾಹಿತಿ ರವಾನಿಸುತ್ತಿದ್ದ ವ್ಯಕ್ತಿಯನ್ನು ವಾರಾಣಸಿಯಲ್ಲಿ ಬಂಧಿಸಲಾಗಿದೆ. ಕರಾಚಿಯಲ್ಲಿನ ಸಂಬಂಧಿ ಯುವತಿಯನ್ನು ಮೊಹಮ್ಮದ್‌ ರಶೀದ್‌ (23) ಪ್ರೀತಿಸುತ್ತಿದ್ದ. ಆಕೆಯನ್ನು ಮದುವೆಯಾಗಲು ನೆರವಾಗುವುದಾಗಿ ಹೇಳಿದ ಇಬ್ಬರು ಐಎಸ್‌ಐ ಸಿಬಂದಿ, ಈತನಿಂದ ಸೂಕ್ಷ್ಮ ಪ್ರದೇಶಗಳು, ಇಲ್ಲಿ ನಡೆಯುವ ರ್ಯಾಲಿಗಳ ಫೋಟೋಗಳನ್ನು ತರಿಸಿಕೊಳ್ಳುತ್ತಿದ್ದರು ಎಂದು ಉ.ಪ್ರ. ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next