Advertisement

ಮೂರು ಸಾವಿರ ಭಾರತೀಯರು ನಿರಾಳ

06:50 AM Dec 21, 2018 | Team Udayavani |

ಚಂಡೀಗಡ: ಸೌದಿ ಅರೇಬಿಯಾದಲ್ಲಿ ಅತಂತ್ರರಾಗಿರುವ ಸುಮಾರು 3 ಸಾವಿರ ಮಂದಿ ಭಾರತೀಯ ನೌಕರರಿಗೆ ಕೇಂದ್ರ ಸರಕಾರ ಸಹಾಯಹಸ್ತ ಚಾಚಿದ್ದು, ನೌಕರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಯಾರು ಸ್ವದೇಶಕ್ಕೆ ವಾಪಸಾಗಲು ಬಯಸುತ್ತಾರೋ ಅವರಿಗೆ ರಿಟರ್ನ್ ಟಿಕೆಟ್‌ ಒದಗಿಸಿದ್ದು, ಯಾರು ಅಲ್ಲೇ ಇದ್ದು ಕೆಲಸ ಮಾಡಲು ಬಯಸುತ್ತಾರೋ, ಅವರ ಪರವಾನಗಿ ನವೀ ಕರಣಕ್ಕೆ ಕೇಂದ್ರ ಸರಕಾರ ಯತ್ನಿಸುತ್ತಿದೆ ಎಂದು ಸಚಿವೆ ಹರ್‌ಸಿಮ್ರತ್‌ ಕೌರ್‌ ಗುರುವಾರ ತಿಳಿಸಿದ್ದಾರೆ.

Advertisement

ಅಲ್ಲದೆ, ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು 13 ನಿರ್ಮಾಣ ಸ್ಥಳಗಳಿಗೆ ಭೇಟಿ ನೀಡಲಿದ್ದು, ಕಾರ್ಮಿಕರ ಸ್ಥಿತಿ ಗತಿ ಬಗ್ಗೆ ಪರಿಶೀಲನೆ ನಡೆಸಲಿದೆ. ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವ ನಿಟ್ಟಿವಲ್ಲಿ ಕಾರ್ಯ ಪ್ರವೃತ್ತವಾಗಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಸೌದಿಯಲ್ಲಿರುವ 3 ಸಾವಿರ ಕಾರ್ಮಿಕರಿಗೆ ಹಲವು ತಿಂಗಳಿಂದ ವೇತನ ನೀಡಿಲ್ಲ, ಅವರ ವೀಸಾ ಮತ್ತು ವಸತಿ ಪರ ವಾನಗಿಯ ಅವಧಿಯೂ ಕೊನೆಗೊಂಡಿದೆ ಎಂಬ ವರದಿ ಹಿನ್ನೆಲೆಯಲ್ಲಿ ಕೌರ್‌ ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ ಈ ಮಾಹಿತಿ ತಲುಪಿಸಿ, ಸಹಾಯ ಕೋರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next