Advertisement

ಮುಂಬಯಿ : ಹುತಾತ್ಮ ಮೇಜರ್‌ಗೆ ಸಾವಿರಾರು ಜನರ ಕಣ್ಣೀರ ವಿದಾಯ 

03:20 PM Aug 09, 2018 | Team Udayavani |

ಥಾಣೆ : ಗುರೇಜ್‌ ಸೆಕ್ಟರ್‌ನಲ್ಲಿ  ಮಂಗಳವಾರ ಗಡಿ ನುಸುಳುತ್ತಿದ್ದ ಉಗ್ರರೊಂದಿಗಿನ ಕಾಳಗದಲ್ಲಿ ವೀರ ಮರಣವನ್ನಪ್ಪಿದ ಮೇಜರ್‌ ಕೌಸ್ತುಭ್‌ ಪಿ ರಾಣೆ ಅವರಿಗೆ ಗುರುವಾರ ಸಾವಿರಾರು ಮಂದಿ ಕಣ್ಣೀರ ವಿದಾಯ ಹೇಳಿದರು. 

Advertisement

29 ರ ಹರೆಯದ ರಾಣೆಯ ಪಾರ್ಥೀವ ಶರೀರರ ಎದುರು ಪುಟ್ಟ ಮಗು ಅಗಸ್ತ್ಯನೊಂದಿಗೆ ಪತ್ನಿ  ಕಾನಿಕಾ ಗೋಳಿಡುತ್ತಿದ್ದ ದೃಶ್ಯ ಎಲ್ಲರ ಕಣ್ಣಲ್ಲಿ ನೀರು ಬರುವಂತೆ ಮಾಡಿತು. 

ನೆರೆದಿದ್ದವರು ಮೇಜರ್‌ ಕೌಸ್ತುಭ್‌ ರಾಣೆ ಅಮರ್‌ ರಹೇ ..ವಂದೇ ಮಾತರಂ ಎಂಬ ಘೋಷಣೆಗಳನ್ನು ಕೂಗಿದರು. 

ರಾಜಕಾರಣಿಗಳು, ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಅಂತಿಮ ನಮನ ಸಲ್ಲಿಸಿದರು. ಮಿಲಿಟರಿ ಗೌರವದೊಂದಿಗೆ ಅಂತಿಮ ಕ್ರಿಯೆ ನಡೆಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next