Advertisement

ಮೂರು ಉತ್ಸವಕ್ಕೆ ರಾಷ್ಟ್ರೀಯ ಮಾನ್ಯತೆ ನೀಡಲು ಚಿಂತನೆ

11:09 PM Mar 06, 2020 | Team Udayavani |

ವಿಧಾನಪರಿಷತ್‌: ನಾಡಹಬ್ಬ ದಸರಾ, ಹಂಪಿ ಉತ್ಸವ ಹಾಗೂ ಬೆಂಗಳೂರು ಹಬ್ಬವನ್ನು ರಾಷ್ಟ್ರೀಯ ಉತ್ಸವದ ಮಾದರಿಯಲ್ಲಿ ನಡೆಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು. ಹಂಪಿ ಉತ್ಸವಕ್ಕೆ ಸಂಬಂಧಿಸಿದಂತೆ ಸದಸ್ಯರಾದ ಅಲ್ಲಂ ವೀರಭದ್ರಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೈಸೂರು ದಸರಾ, ಹಂಪಿ ಉತ್ಸವ ಹಾಗೂ ಬೆಂಗಳೂರು ಹಬ್ಬವನ್ನು ರಾಷ್ಟ್ರೀಯ ಉತ್ಸವದ ರೀತಿಯಲ್ಲಿ ನಡೆಸಲು ಮುಂದಾಗಿದ್ದೇವೆ.

Advertisement

ಹಂಪಿ ಉತ್ಸವ ಅನೇಕ ವರ್ಷದಿಂದ ನಡೆಯುತ್ತಿದೆಯಾದರೂ ನಿಗದಿತ ದಿನಾಂಕದಂದು ನಡೆ ಯುತ್ತಿರಲಿಲ್ಲ. ಕೆಲವು ವರ್ಷ ನಡೆಯದ ನಿದರ್ಶನವೂ ಇದೆ. ಹೀಗಾಗಿ ಪ್ರತಿ ವರ್ಷ ಕೃಷ್ಣದೇವರಾಯನ ಪಟ್ಟಾಭಿ ಷೇಕವಾದ ದಿನ ಜ.10ರಿಂದ 3 ದಿನ ಹಂಪಿ ಉತ್ಸವ ನಡೆ ಸಲು ನಿರ್ಧರ ಮಾಡಿದ್ದೇವೆಂದರು.

ಹಾಗೆಯೇ ರಾಜ್ಯದ ಪ್ರಮುಖ ಮಹಾರಾಜ ಸಂಸ್ಥಾನಗಳಾದ ಕಲ್ಯಾಣ ಚಾಲುಕ್ಯರು, ಬಾದಾಮಿ ಚಾಲುಕ್ಯರು, ಕದಂಬರು, ಚಿತ್ರದುರ್ಗ ನಾಯಕರು ಸೇರಿದಂತೆ 9 ರಾಜ್ಯ ಉತ್ಸವ ನಡೆಸಲು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಹಂಪಿಯಲ್ಲಿ ರೋಪ್‌ ವೇ ಅಥವಾ ಇತರೆ ಅಭಿವೃದ್ಧಿ ಕಾರ್ಯಕ್ಕೆ ಜಾಗತಿಕ ಮಟ್ಟದ ಅನುಮತಿ ಅಗತ್ಯವಿರುವು ದರಿಂದ ವಿಶ್ವ ಪ್ರಸಿದ್ಧ ತಾಣವಾಗಿದ್ದರಿಂದ ಅನುಮತಿ ಸಿಕ್ಕ ನಂತರ ಈ ಬಗ್ಗೆ ಚಿಂತನೆ ನಡೆಸಲಿದ್ದೇವೆಂದರು.

Advertisement

Udayavani is now on Telegram. Click here to join our channel and stay updated with the latest news.

Next