Advertisement

ರಾಜಕೀಯ ನಿವೃತ್ತಿಗೆ ಚಿಂತನೆ: ಜಿಗಜಿಣಗಿ

11:09 PM Jan 04, 2020 | Lakshmi GovindaRaj |

ವಿಜಯಪುರ: ನಾಲ್ಕೂವರೆ ದಶಕದಿಂದ ರಾಜಕೀಯ ಜೀವನದಲ್ಲಿರುವ ನಾನು ಜನರಿಂದ ಛೀ..ಥೂ..ಎನಿಸಿಕೊಳ್ಳುವ ಮುನ್ನವೇ ಗೌರವದಿಂದ ನಿವೃತ್ತಿ ಆಗುವೆ ಎಂದು ಕೇಂದ್ರದ ಮಾಜಿ ಸಚಿವರೂ ಆದ ಸಂಸದ ರಮೇಶ ಜಿಗಜಿಣಗಿ ತಿಳಿಸಿದರು. ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಮಕೃಷ್ಣ ಹೆಗಡೆ ಅವರಂಥ ಸೈದ್ಧಾಂತಿಕ ನಾಯಕರ ಗರಡಿಯಲ್ಲಿ ಬೆಳೆದವನು ನಾನು. ರಾಜಕೀಯಕ್ಕೆ ಗೌರವದಿಂದ ಬಂದಿದ್ದೇನೆ, ಗೌರವದಿಂದಲೇ ನಿರ್ಗಮಿಸುತ್ತೇನೆ.

Advertisement

ಹೀಗಾಗಿ ಮುಂದಿನ ಚುನಾವಣೆಯಲ್ಲಿ ಸ್ಪ ರ್ಧಿಸುವುದು ಅನುಮಾನ ಎಂದರು. ವಿಜಯಪುರ ವಿಮಾನ ನಿಲ್ದಾಣ ವಿಷಯವಾಗಿ ಎಲ್ಲ ಗೊಂದಲಗಳು ನಿವಾರಣೆಯಾಗಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ 220 ಕೋಟಿ ರೂ. ಪ್ರಸ್ತಾವನೆ ಸರ್ಕಾರದ ಮುಂದಿದೆ. ಕಾಮಗಾರಿಗೆ ಚಾಲನೆ ನೀಡುವ ಕುರಿತು ಶೀಘ್ರವೇ ಸಂಪುಟ ಸಭೆಯಲ್ಲಿ ತಾರ್ಕಿಕ ಅಂತ್ಯ ಸಿಗಲಿದೆ. ನನ್ನ ಈ ಅವಧಿಯಲ್ಲಿ ಗುಮ್ಮಟದ ಮೇಲೆ ವಿಮಾನ ಹಾರಿಸಿಯೇ ನಿವೃತ್ತಿಯಾಗುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next