Advertisement

ಧಾರಾಕಾರ ಮಳೆಯಾಗಿ ನದಿ ತುಂಬಿ ಹರಿಯುತ್ತಿದ್ದರೂ, ಸೇತುವೆ ಮೇಲಿಂದ ಜಿಗಿದು ಯುವಕರ ಹುಚ್ಚಾಟ !

06:43 PM Oct 16, 2020 | Mithun PG |

ಬೀದರ್: ಮೈದುಂಬಿಕೊಂಡು ಹರಿಯುತ್ತಿರುವ ಔರಾದ ತಾಲೂಕಿನ ಕೌಠಾ (ಬಿ) ಮಾಂಜ್ರಾ ಬಾಂದಾರ ಸೇತುವೆ ಮೇಲಿಂದ ಜಿಗಿದು ಯುವಕರು ಹುಚ್ಚಾಟ ಪ್ರದರ್ಶಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Advertisement

ವಾಯುಭಾರ ಕುಸಿತದಿಂದಾಗಿ ಧಾರಾಕಾರ ಮಳೆಯಾಗಿ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಜೀವನದಿ ಮಾಂಜ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ವೇಳೆ ಬೀದರ-ನಾಂದೇಡ ಹೆದ್ದಾರಿಯಲ್ಲಿರುವ ಕೌಠಾ ಸೇತುವೆಯಲ್ಲಿ ೫೦ ಅಡಿ ಎತ್ತರದ ಮೇಲಿಂದ ಯುವಕರ ಗುಂಪು ನದಿಗೆ ಹಾರಿ ಈಜಾಡುವ ದುಸ್ಸಾಹಸ ಪ್ರದರ್ಶಿಸಿ ಅಪಾಯವನ್ನು ತಂದುಕೊಳ್ಳುತ್ತಿದೆ.

ಪ್ರವಾಹ ಸ್ಥಿತಿಯಿಂದ ರೈತರು ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದರೆ ಇತ್ತ ಕಿಡಿಗೇಡಿ ಯುವಕರು ಹುಚ್ಚಾಟ ತೋರುತ್ತಿದ್ದಾರೆ. ಹಲವು ಯುವಕರ ಗುಂಪು ಸೇತುವೆ ಮೇಲೆ ಜಮಾಯಿಸಿ ನೀರಿಗೆ ಹಾರುತ್ತಿದ್ದ ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ನದಿಗಳು, ಕೆರೆಗಳು ತುಂಬಿ ಹರಿಯುತ್ತಿರುವುದರಿಂದ ಕಳೆದೆರಡು ದಿನಗಳ ಹಿಂದೆಯೇ ಜಿಲ್ಲಾಧಿಕಾರಿ ರಾಮಚಂದ್ರನ್ ಅವರು, ಯಾರೂ ಅಪಾಯದ ಸಾಹಸ ಮಾಡದಂತೆ ಮನವಿ ಮಾಡಿದ್ದರೂ ಅದಕ್ಕೆ ಕ್ಯಾರೆ ಎನ್ನುತ್ತಿಲ್ಲ ಎಂದು ತಿಳಿದುಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next