Advertisement

ಪರೀಕ್ಷೆ ನಿರಾಕರಿಸಿದವರು ಹಿಂದೆ ಹಿಜಾಬ್ ಧರಿಸುತ್ತಿರಲಿಲ್ಲ : ಸಚಿವ ನಾರಾಯಣ ಗೌಡ

01:52 PM Feb 14, 2022 | Team Udayavani |

ಬೆಂಗಳೂರು: ಪರೀಕ್ಷೆ ಬರೆಯಲು ನಿರಾಕರಿಸಿದ ವಿದ್ಯಾರ್ಥಿನಿಯರು ಹಿಂದೆ ಹಿಜಾಬ್ ಧರಿಸುತ್ತಿರಲಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ತಿಳಿಸಿದ್ದಾರೆ.

Advertisement

ವಿವಾದದ ಬಗ್ಗೆ ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿದ ಅವರು,ಶಿವಮೊಗ್ಗದಲ್ಲಿ‌ಗೊಂದಲ ನಡೆದಿದೆ.ಮಕ್ಕಳು ಎಕ್ಸಾಂ ಬರೆಯೋದಕ್ಕೆ ತೊಂದರೆಯಿಲ್ಲ.ನಾನು ಡಿಸಿ,ಎಸ್ಪಿ ಜೊತೆ ಮಾತನಾಡಿದ್ದೇವೆ.೭ ಜನ ಮಕ್ಕಳು ಪರೀಕ್ಷೆ ಬರೆದಿಲ್ಲ ಎಂದು ಹೇಳಿದರು.

ನ್ಯಾಯಾಲಯದ ಆದೇಶವಿದೆ ಹಿಜಾಬ್ ತೆಗೆದು ಒಳ ಬನ್ನಿ ಎಂದು ಶಿಕ್ಷಕರು ಹೇಳಿದ್ದಾರೆ.ಅವರು ಹಿಜಾಬ್ ತೆಗೆದು ಬಂದಿಲ್ಲ ನಂತರ ಅವರ ಪೋಷಕರನ್ನ ಕರೆಸಿದ್ದಾರೆ.ಪೋಷಕರ ಜೊತೆಯೇ ಆ ಮಕ್ಕಳು‌ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಶಿವಮೊಗ್ಗ: ಹಿಜಾಬ್ ಗೆ ಅವಕಾಶ ನೀಡದ ಕಾರಣ ಪರೀಕ್ಷೆಯನ್ನೇ ಬಹಿಷ್ಕರಿಸಿದ ವಿದ್ಯಾರ್ಥಿನಿಯರು!

ಮೊದಲು ಆ ಮಕ್ಕಳು ಹಿಜಾಬ್ ಹಾಕ್ತಿರಲಿಲ್ಲ. ಆದರೆ ಇವತ್ತು ಹಾಕಿಕೊಂಡು ಬಂದಿದ್ದಾರೆ. ಇದರ ಹಿಂದೆ ಏನಿದೆಯೋ ಗೊತ್ತಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next