Advertisement

R. Ashok: ಚಾಮುಂಡೇಶ್ವರಿಗೆ ಅವಮಾನ ಮಾಡಿದವರಿಗೆ ತಕ್ಕ ಶಿಕ್ಷೆ

06:54 PM Oct 04, 2024 | Team Udayavani |

ಚಿತ್ರದುರ್ಗ:ಈ ಬಾರಿಯ ದಸರಾದಲ್ಲಿ ತಾಯಿ ಚಾಮುಂಡೇಶ್ವರಿಗೆ ಅವಮಾನ ಮಾಡಿದ್ದಾರೆ. ದಸರಾ ಮಹೋತ್ಸವದಲ್ಲಿ ಚಾಮುಂಡೇಶ್ವರಿ ತಾಯಿಯನ್ನು ವೈಭವೀಕರಿಸಬೇಕು. ಆದರೆ ಸರ್ಕಾರದ ಅಸ್ಥಿರತೆ, ರಾಜೀನಾಮೆಯ ರಾಜಕೀಯ ಮಾತನಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಅಸಮಧಾನ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಮೈಸೂರು ದಸರಾ ಮಹೋತ್ಸವದಲ್ಲಿ ಮಹಾರಾಜರ ಕೊಡುಗೆ, ಚಾಮುಂಡೇಶ್ವರಿ ಬಗ್ಗೆ ಯಾರೂ ಮಾತನಾಡಲಿಲ್ಲ. ಉದ್ಘಾಟನೆ ಮಾಡಿದ ಸಾಹಿತಿ ಕೂಡಾ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ. ಕಾಂಗ್ರೆಸ್‌ ಕುತಂತ್ರದಿಂದ ಸಾರ್ವಜನಿಕ ದಸರಾವನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಂಡಿದ್ದು, ಇದು ಚಾಮುಂಡೇಶ್ವರಿ ತಾಯಿಗೆ ಮಾಡಿದ ಅವಮಾನ. ಇದಕ್ಕೆ ಆ ತಾಯಿ ಸರಿಯಾದ ಶಿಕ್ಷೆ ಕೊಡಲಿದ್ದಾರೆ ಎಂದರು.

 

 

Advertisement

Udayavani is now on Telegram. Click here to join our channel and stay updated with the latest news.

Next