Advertisement

ತೊಕ್ಕೊಟ್ಟು : ವಾಹನ ಸೀಝ್ ಪೊಲೀಸ್ –ಸವಾರರ ಮಧ್ಯೆ ವಾಗ್ವಾದ

02:42 PM Apr 13, 2020 | sudhir |

ಉಳ್ಳಾಲ : ತೊಕ್ಕೊಟ್ಟುವಿನಿಂದ ಉಳ್ಳಾಲದತ್ತ ಅನಾವಶ್ಯಕವಾಗಿ ತಿರುಗಾಡುತ್ತಿದ್ದ ವಾಹನಗಳನ್ನು ಸೀಝ್ ಮಾಡುತ್ತಿದ್ದ ಉಳ್ಳಾಲ ಪೊಲೀಸರ ಮತ್ತು ಸಾರ್ವಜನಿಕರ ನಡುವೆ ತೀವ್ರ ವಾಗ್ವಾದ ನಡೆದ ಪ್ರಸಂಗ ಇಂದು ನಡೆದಿದೆ.

Advertisement

ದಿನಬಳಕೆ ವಸ್ತುಗಳ ಖರೀದಿಗಾಗಿ ಲಾಕ್‍ಡೌನ್  ಸಡಿಲಿಕೆ ಮಾಡಿರುವುದನ್ನೇ ದುರುಪಯೋಗಪಡಿಸಿಕೊಂಡವರು   ಯಥೇಚ್ಛವಾಗಿ ವಾಹನಗಳಲ್ಲಿ ಸುತ್ತಾಡುತ್ತಿದ್ದರು. ಅದಕ್ಕಾಗಿ ತೊಕ್ಕೊಟ್ಟುವಿನಿಂದ ಉಳ್ಳಾಲಕ್ಕೆ ತೆರಳುವ  ರಸ್ತೆಗೆ  ಪೊಲೀಸರು ಬ್ಯಾರಿಕೇಡ್ ಅಳವಡಿಸಿ , ಪರಿಶೀಲನೆ ನಡೆಸಿಯೇ ವಾಹನಗಳನ್ನು ಬಿಡುತ್ತಿದ್ದರು.  ಇಂದು ಬೆಳಿಗ್ಗೆ ಕೆಲ ವಾಹನಗಳು  ಅನಾವಶ್ಯವಾಗಿ ತಿರುಗಾಡುತ್ತಿತ್ತು. ಇದೇ ವೇಳೆ ಮಹಿಳೆಯೊಬ್ಬರೂ ಸಂಚರಿಸುತ್ತಿದ್ದರು. ಉಳ್ಳಾಲ ಪೊಲೀಸರು ತಡೆದು  ಪ್ರಶ್ನಿಸಿ ಕೆಲ ವಾಹನಗಳನ್ನು ಸೀಝ್ ನಡೆಸಲು ಆರಂಭಿಸಿದ್ದರು. ಇದರಿಂದ  ಸ್ಥಳದಲ್ಲಿ ಅಧಿಕ ಜನಜಂಗುಳಿ ಜಮಾಯಿಸಿ, ಸಾಮಾಜಿಕ ಅಂತರವನ್ನು ಕಾಪಾಡದೆ ಪೊಲೀಸರ ಮಧ್ಯೆ ವಾಗ್ವಾದಕ್ಕೆ ಇಳಿದಿದ್ದಾರೆ.  ದಿನಬಳಕೆ ವಸ್ತುಗಳ ಖರೀದಿಗಾಗಿ ತೆರಳುವವರ ವಿರುದ್ಧ ಪೊಲೀಸರ ಕ್ರಮದ ವಿರುದ್ಧ ಸಾರ್ವಜನಿಕರು ವಾಗ್ವಾದ ನಡೆಸಿದರೆ, ಪೊಲೀಸರು ತಮ್ಮ ಕ್ರಮವನ್ನು ಸಮರ್ಥಿಸಿದ ಹಿನ್ನೆಲೆಯಲ್ಲಿ  15 ನಿಮಿಷಗಳ ಕಾಲ ವಾಗ್ವಾದ ಮುಂದುವರಿಯಿತು.

Advertisement

Udayavani is now on Telegram. Click here to join our channel and stay updated with the latest news.

Next