Advertisement

ಈ ದೇಶ ಹಾಳಾಗಿದ್ದು ಜವಾಹರ್ ಲಾಲ್ ನೆಹರು ಅವರಿಂದಲೇ : ಯತ್ನಾಳ್

09:00 PM May 27, 2022 | Team Udayavani |

ದೋಟಿಹಾಳ: ಪಂಡಿತ್ ಜವಾಹರ್ ಲಾಲ್ ನೆಹರು ಅವರಿಂದಲೇ ಈ ದೇಶ ವಿಭಜನೆಯಾಯಿತು ಭಾರತ- ಪಾಕಿಸ್ತಾನವಾಗಿ ವಿಭಜನೆ ಗೊಳ್ಳಲು ಮುಖ್ಯ ಕಾರಣ ಜವಾಹರ್ ಲಾಲ್ ನೆಹರು.  ಮಹಾತ್ಮ ಗಾಂಧಿಯವರು  ನೆಹರು ಅವರ ಸಲುವಾಗಿಯೇ ಈ ದೇಶವನ್ನು ವಿಭಜನೆ ಮಾಡಿದರು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಹೇಳಿದರು.

Advertisement

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿ ಬಳೂಟಗಿ ಗ್ರಾಮಕ್ಕೆ ಭೇಟಿ ನೀಡಿ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿ, ಸಿದ್ದರಾಮಯ್ಯ ಅವರು ಇತ್ತೀಚಿಗೆ ಆರ್‌ಎಸ್‌ಎಸ್, ಸಂಘ ಪರಿವಾರವನ್ನೇ ಟೀಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಸಿದ್ದರಾಮಯ್ಯನವರು ಹತಾಶೆ ಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗೆ ಭವಿಷ್ಯ ಇಲ್ಲವೆಂದು ತಿಳಿದು ಮಾತನಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ತಳ ಮಟ್ಟಿಗೆ ಕುಸಿದು ಹೋಗುತ್ತಿದೆ. ಆದರೆ ಸಿದ್ದರಾಮಯ್ಯ ಅವರಿಗೆ ಆ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗಲು ಯಾವುದೇ ಪ್ರಾದೇಶಿಕ ಪಕ್ಷವಿಲ್ಲ. ಅವರಿಗೆ ಬಿಜೆಪಿ ಬರಲು ಮನಸ್ಸಿಲ್ಲ ಹೀಗಾಗಿ ಅವರಿಗೆ ದಾರಿ ಕಾಣದಂತಾಗಿದೆ ಎಂದರು.

ಅದರೆ ಗಾಂಧೀಜಿ ಮತ್ತು ಡಾ| ಬಿ.ಆರ್ ಅಂಬೇಡ್ಕರ್ ವಿಭಜನೆ ಮಾಡುವ ಮನಸ್ಸಿರಲಿಲ್ಲ. ಪಂಡಿತ್ ಜವಾಲಾಲ್ ನೆಹರು ಅವರೆ ಒಂದು ದೊಡ್ಡ ಶಾಪ.ಕಾಶ್ಮೀರದಲ್ಲಿ 370 ಕಲಂ ಜಾರಿಗೆ ತಂದರು. ಡಾ| ಬಿ.ಆರ್ ಅಂಬೇಡ್ಕರ್ ಅವರು ಒಂದು ವೇಳೆ ಈ ದೇಶವನ್ನು ವಿಭಜನೆ ಮಾಡುವ ಮೊದಲು ಅಲ್ಲಿರುವ ಹಿಂದುಗಳನ್ನು ಇಲ್ಲಿಗೆ ಕಳಿಸಿ. ಇಲ್ಲಿರುವ ಮುಸ್ಲಿಮರನ್ನು ಅಲ್ಲಿಗೆ ಕಳಿಸಿ ಎಂದು ಕಿವಿಮಾತು ಹೇಳಿದ್ದರು. ಆದರೆ ಅದನ್ನು ನೆಹರು ಮಾಡಲಿಲ್ಲ ಎಂದರು.

ಒಂದು ವೇಳೆ ದಿನ ಡಾ. ಬಿ.ಆರ್ ಅಂಬೇಡ್ಕರ್ ಅವರು ದೇಶದ ಪ್ರಧಾನ ಮಂತ್ರಿಯಾಗಿದ್ದರೆ ದೇಶ ವಿಭಜನೆ ಆಗುತ್ತಿರಲಿಲ್ಲ ಮತ್ತು ಕಾಶ್ಮೀರದಲ್ಲಿ 370 ಕಲಂ ಜಾರಿಗೆ ಬರುತ್ತಿಲ್ಲ. ಅಂದು ನೆಹರು ಅವರು ಮಾಡಿದ ತಪ್ಪುಗಳನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿವರು ತಿದ್ದುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೇ ಇಲ್ಲ ಎಂದರು.

ಈ ದೇಶದಲ್ಲಿರುವ ಮುಸ್ಲಿಮರು ಇಲ್ಲಿಯವರೇ. ಮೊಘಲರು ಮತ್ತು ಟಿಪ್ಪು ಸುಲ್ತಾನ್ ಅವರ ಆಳ್ವಿಕೆಯಲ್ಲಿ ಮತಾಂತರ ಹೊಂದಿದವರು. ಅವರೇನು ಅಪಘಾನಿಸ್ತಾನ ಅಥವಾ ಸೌದಿ ಅರಬಿದಿಂದ ಬಂದವರಲ್ಲ, ಆ ದಿನಗಳಲ್ಲಿ ಹಿಂದೂ ಧರ್ಮದ ಮೇಲೆ ದಬ್ಬಾಳಿಕೆ ನಡೆದ ಕಾರಣ ಕೆಲವರು ಮುಸಲ್ಮಾನರಾಗಿ ಮತಾಂತರ ಗೊಂಡಿದ್ದಾರೆ. ಅವರು ಇಲ್ಲಿಯ ಮೂಲವಾಸಿಗರು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next