Advertisement

Thirthahalli: ಅಕ್ರಮ ಗೋ ಸಾಗಾಟ… ವಾಹನ ಸಮೇತ ವ್ಯಕ್ತಿಯನ್ನು ಹಿಡಿದ ಸ್ಥಳೀಯರು !

10:27 AM Jan 24, 2024 | Team Udayavani |

ತೀರ್ಥಹಳ್ಳಿ : ತಾಲೂಕಿನಾದ್ಯಂತ ಗೋಗಳ್ಳರ ಅಟ್ಟಹಾಸ ಮೀತಿ ಮೀರುತ್ತಿದ್ದು ಇತ್ತೀಚಿಗೆ ಸೀಬಿನಕೆರೆಯಲ್ಲಿರುವ ನ್ಯಾಯಾಲಯದ ಆವರಣದಲ್ಲಿ ಮಲಗಿದ್ದ ಹಸುಗಳನ್ನು ಐಷಾರಾಮಿ ಕಾರಿನಲ್ಲಿ ರಾತ್ರೋ ರಾತ್ರಿ ಕದ್ದೋಯ್ದ ಘಟನೆ ನಡೆದು ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಒಳಗಾಗಿತ್ತು.

Advertisement

ಈ ವಿಷಯ ಮಾಸುವ ಮುನ್ನವೇ ಹೆದ್ದೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿಯಲ್ಲಿ ಬುಧವಾರ ಬೆಳಗಿನ ಜಾವ ಹಸುಗಳನ್ನು ಅಕ್ರಮವಾಗಿ ವಾಹನದಲ್ಲಿ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಸ್ಥಳೀಯರು ವಾಹನ ಸಮೇತ ನಾಲ್ಕು ಹಸು ಕರುಗಳನ್ನು ಸೆರೆ ಹಿಡಿದು ವ್ಯಕ್ತಿಯೋರ್ವನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಾಳೂರು ಪೊಲೀಸ್ ಠಾಣೆಗೆ ಆ ವ್ಯಕ್ತಿಯನ್ನು ಒಪ್ಪಿಸಿದ್ದು ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Ayodhya: ರಾಜಸ್ಥಾನದ ಶಿಲ್ಪಿ ಕೆತ್ತಿದ ರಾಮಲಲ್ಲಾನ ಎರಡನೇ ವಿಗ್ರಹದ ಚಿತ್ರ ಬಹಿರಂಗ

Advertisement

Udayavani is now on Telegram. Click here to join our channel and stay updated with the latest news.

Next