Advertisement

ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌: ಆಂಧ್ರಪ್ರದೇಶ ಚಾಂಪಿಯನ್‌

01:01 PM Aug 19, 2017 | |

ಬೆಂಗಳೂರು: ಉದ್ಯಾನನಗರಿಯಲ್ಲಿ ಗುಜರಾತ್‌ ವಿರುದ್ಧ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದ ಆಂಧ್ರಪ್ರದೇಶ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟ್ರೋಫಿ ಗೆದ್ದಿದೆ. ಫೈನಲ್‌ನಲ್ಲಿ ಗುಜರಾತ್‌ ತಂಡ ಪಂದ್ಯ ಡ್ರಾ ಸಾಧಿಸಿದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೆ ಭಾರೀ ನಿರಾಶೆ ಅನುಭವಿಸಿತು. 4ನೇ ಹಾಗೂ ಅಂತಿಮ ದಿನದ ಆಟದಲ್ಲಿ ಆಂಧ್ರಪ್ರದೇಶ 1ನೇ ಇನಿಂಗ್ಸ್‌ನಲ್ಲಿ 187.5 ಓವರ್‌ಗಳ ತನಕ ಆಡಿತು. ಒಟ್ಟು 8 ವಿಕೆಟ್‌ಗೆ ಭರ್ಜರಿ 527 ರನ್‌ ವಿಸ್ತರಿಸಿತು. ಕೊನೆಯ ದಿನ ಸುಮಂತ್‌ (ಅಜೇಯ 75), ಶೋಯೆಬ್‌ ಮೊಹಮ್ಮದ್‌ ಖಾನ್‌ (51 ರನ್‌) ಹಾಗೂ ವೇಣು ಗೋಪಾಲ್‌ ರಾವ್‌ (56 ರನ್‌)ಗಳಿಸಿ ಮಿಂಚಿದರು.

Advertisement

ಇದಕ್ಕೂ ಮೊದಲು ಗುಜರಾತ್‌ ಮೊದಲ ಇನಿಂಗ್ಸ್ ನಲ್ಲಿ 111 ಓವರ್‌ಗೆ 365 ರನ್‌ ಮಾಡಿ ಆಲೌಟಾಗಿತ್ತು. ಇದಕ್ಕುತ್ತರವಾಗಿ ಆಂಧ್ರಪ್ರದೇಶ ಮಾಡಿ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next