Advertisement

ಶಾಲಾ ಬಿಸಿಯೂಟದ ಗೋಧಿ, ಪಾತ್ರೆ, ಸಿಲಿಂಡರ್, ತಂಬಿಗೆ ಕದ್ದ ಕಳ್ಳರು!

12:14 PM Dec 10, 2021 | keerthan |

ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಕಮನಡಿ, ಕೊಟ್ಟಲಗಿ ಕ್ರಾಸ್ ಸರ್ಕಾರಿ ಶಾಲೆಯ ಬಿಸಿಯೂಟದ ಸಾಮಗ್ರಿ ಕಳ್ಳತನ‌ ಮಾಡಲಾಗಿದೆ. ರಾತ್ರಿ ವೇಳೆ ಕಿಡಿಗೇಡಗಿಳಿಂದ ಶಾಲೆಯ ನಾಲ್ಕು ಕೋಣೆಗಳ ಕೀಲಿ‌ ಮುರಿದು ಕಳ್ಳತನ ಮಾಡಿದ್ದಾರೆ.

Advertisement

ಶಾಲೆಯ ಬಿಸಿಯೂಟ ತಯಾರಿಕೆಗೆ ಸಂಗ್ರಹಿದ್ದ 2 ಸಿಲಿಂಡರ್, 60 ಕೆ.ಜಿ ಗೋಧಿ, 55 ಅಡುಗೆ ಎಣ್ಣೆ ಪಾಕೇಟ್, 13 ಹಾಲಿನ ಪಾಕೀಟ್, ಊಟದ 25 ತಟ್ಟೆ , 10 ತಂಬಿಗೆ ಕಳ್ಳತನ ಮಾಡಿದ್ದಾರೆ.

ಸರ್ಕಾರಿ ಶಾಲೆ ಮಾತ್ರವಲ್ಲದೇ, ಶಾಲೆಗೆ ಹೊಂದಿಕೊಂಡಿರುವ ಅಂಗನವಾಡಿ ಕೇಂದ್ರಕ್ಕೂ ಕಳ್ಳರು ನುಗ್ಗಿದ್ದು, ಅಂಗನವಾಡಿ ಕೇಂದ್ರದಲ್ಲಿದ್ದ 30 ಸಾವಿರ ರೂ. ಮೌಲ್ಯದ ಸೋಲಾರ್ ಬ್ಯಾಟರಿ ಕಳ್ಳತನ ಮಾಡಿಕೊಂಡು ಪರಾರಿ ಆಗಿದ್ದಾರೆ.

ಇದನ್ನೂ ಓದಿ:ಹೆಲಿಕಾಪ್ಟರ್ ದುರಂತವನ್ನು ಸಂಭ್ರಮಿಸಿದವರನ್ನು ಯಾರೂ ಕ್ಷಮಿಸಬಾರದು: ಸಿಎಂ ಬೊಮ್ಮಾಯಿ

ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Advertisement

ಘಟನೆ ಕುರಿತು ಶಿಕ್ಷಣ ಇಲಾಖೆ ಹಾಗೂ ಅಕ್ಷರ ದಾಸೋಹ ಅಧಿಕಾರಿಗಳಿಗೆ ಮಾಹಿತಿ ತಿಳಿಸಲಾಗಿದೆ ಎಂದು ಮುಖ್ಯ ಶಿಕ್ಷಕ ಬಿ.ಕೆ.ನಾಟೀಕಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next