Advertisement

ವಿಮಾನ ನಿಲ್ದಾಣದಲ್ಲಿ ಪೋಷಕರಿಗೆ ಕಿರುಕುಳ : ಭದ್ರತಾ ಪಡೆ ವಿರುದ್ಧ ನಟ ಸಿದ್ದಾರ್ಥ್‌ ಆರೋಪ

11:56 AM Dec 28, 2022 | Team Udayavani |

ಚೆನ್ನೈ:ವಿಮಾನ ನಿಲ್ದಾಣದಲ್ಲಿ ತನ್ನ ತಂದೆ – ತಾಯಿಗೆ ಅಲ್ಲಿನ ಸಿಬ್ಬಂದಿಗಳು ಕಿರುಕುಳ ನೀಡಿದ್ದಾರೆ ಎಂದು ಕಾಲಿವುಡ್‌ ನಟ ಸಿದ್ದಾರ್ಥ್‌ ಅವರು ಆರೋಪಿಸಿದ್ದಾರೆ.

Advertisement

ಈ ಬಗ್ಗೆ ಇನ್ಸ್ಟಾಗ್ರಾಮ್‌ ನಲ್ಲಿ ಮಂಗಳವಾರ ಸ್ಟೋರಿ ಹಂಚಿಕೊಂಡು ಮಾಹಿತಿ ನೀಡಿರುವ ಅವರು,  ಮಧುರೈ ವಿಮಾನ ನಿಲ್ಧಾಣದ ಭದ್ರತಾ ಸಿಬ್ಬಂದಿಗಳು ಸುಮಾರು 20 ನಿಮಿಷಗಳ ಕಾಲ ನನ್ನ ತಂದೆ – ತಾಯಿಗೆ ಕಿರುಕುಳ ನೀಡಿದ್ದಾರೆ. ಅವರ ಬ್ಯಾಗ್‌ ನಿಂದ ನಾಣ್ಯಗಳನ್ನು ತೆಗೆಯಲು ಹೇಳಿದ್ದಾರೆ. ಪದೇ ಪದೇ ತಂದೆ – ತಾಯಿಯ ಬಳಿ ಹಿಂದಿಯಲ್ಲಿ ಮಾತನಾಡಿದ್ದಾರೆ. ಇಂಗ್ಲಿಷ್‌ ನಲ್ಲಿ ಮಾತನಾಡಿದರೂ ಅವರ ಮಾತಿಗೆ ಯಾವುದೇ ಪ್ರತಿಕಿಯೆ ನೀಡದೆ ಹಿಂದಿಯಲ್ಲೇ ಮಾತನಾಡಿದ್ದಾರೆ. ಇದರ ಬಗ್ಗೆ ಧ್ವನಿ ಎತ್ತಿದಾಗ ಇದು ಭಾರತ ಇಲ್ಲಿ ಹೀಗೆಯೇ ಆಗುವುದು ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ ಎಂದು  ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸಲ್ಮಾನ್‌ ಖಾನ್ ಬರ್ತ್‌ ಡೇ ವಿಶ್‌ ಗೆ ನೂಕುನುಗ್ಗಲು: ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್

ಮಧುರೈ ವಿಮಾನ ನಿಲ್ಧಾಣದ ನಿರ್ವಹಣೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ನೋಡಿಕೊಳ್ಳುತ್ತದೆ. ಆದರೆ ಅದ್ಯಾಕೋ ನಟ ಸಿದ್ದಾರ್ಥ್‌ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ ಪಿಎಫ್)‌ ಮೇಲೆ ಆರೋಪ ಮಾಡಿದ್ದಾರೆ.

ಕಳೆದ 20 ವರ್ಷಗಳಿಂದ ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ನಟಿಸುತ್ತಿರುವ ಸಿದ್ದಾರ್ಥ್‌ ತನ್ನ ರಾಜಕೀಯ ನಿಲುವುಗಳಿಂದ ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next