Advertisement
ಆರೋಪಿ ಪರಶುರಾಮ ಕೆಲ ವರ್ಷಗಳಿಂದ ಅರೆ ಹುಚ್ಚನಂತೆ ವರ್ತಿಸುತ್ತಿದ್ದ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಅನುಭವಿಸಿ ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದು ರಸ್ತೆಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ವಸ್ತುಗಳನ್ನು ಆಯ್ದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಶನಿವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ತಾಪಂ ಆವರಣಕ್ಕೆ ಬಂದ ಪರಶುರಾಮನನ್ನು ಕಚೇರಿಯೊಳಗೆ ಹೋಗಲು ಕಾವಲು ಸಿಬ್ಬಂದಿ ಬಿಡಲಿಲ್ಲ. ಇದರಿಂದ ಕೋಪಗೊಂಡು ಶೆಡ್ನಲ್ಲಿ ನಿಲ್ಲಿಸಿದ ತಾಪಂ ಅಧ್ಯಕ್ಷರ ಹಳೇ ಜೀಪಿಗೆ ಬೆಂಕಿ ಇಟ್ಟಿದ್ದಾನೆ.