Advertisement

Kochi: ಕ್ಯೂಸಾಟ್‌ ಕಾರ್ಯಕ್ರಮಕ್ಕೆ ಅನುಮತಿ ಇರಲಿಲ್ಲ: ಪೊಲೀಸರ ಸ್ಪಷ್ಟನೆ

09:39 PM Nov 26, 2023 | Team Udayavani |

ಕೊಚ್ಚಿ: ಕೊಚ್ಚಿ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯಲ್ಲಿ ಶನಿವಾರ ನಡೆದಿದ್ದ ಸಂಗೀತೋತ್ಸವಕ್ಕೆ ಪೂರ್ವಾನುಮತಿಯನ್ನೇ ಪಡೆದುಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ವಿವಿ ಆಡಳಿತ ಮಂಡಳಿ ಅಥವಾ ಕಾರ್ಯಕ್ರಮ ಆಯೋಜಕರಿಂದ ಮನವಿಯೇ ಸಲ್ಲಿಕೆಯಾಗಿಲ್ಲ ಎಂದು ಕೊಚ್ಚಿ ನಗರ ಪೊಲೀಸ್‌ ಆಯುಕ್ತ ಎ.ಅಕ್ಬರ್‌ ಹೇಳಿದ್ದಾರೆ.

Advertisement

ಇನ್ನೊಂದೆಡೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಉನ್ನತ ಶಿಕ್ಷಣ ಸಚಿವೆ ಆರ್‌.ಬಿಂದು, ತಜ್ಞರ ಸಮಿತಿಯೊಂದನ್ನು ರಚಿಸಿ ಘಟನೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಈ ಸಮಿತಿಯು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ದಾರಿಗಳನ್ನು ಸೂಚಿಸಲಿದೆ ಎಂದಿದ್ದಾರೆ. ಒಟ್ಟಾರೆ ಘಟನೆಗೆ ಆಯೋಜಕರೇ ಹೊಣೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಂಗೀತೋತ್ಸವ ದುರಂತದ ಬಗ್ಗೆ ಕೇರಳದ ಪ್ರಮುಖ ನಾಯಕರು ದುಃಖ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next