Advertisement
ಟೆಕ್ ಸಮಿಟ್ಯಶ ಕಂಡಿದ್ದು ಹೇಗೆ? :
Related Articles
Advertisement
ಉದ್ಯೋಗಾವಕಾಶ ಸೃಷ್ಟಿಗೆ ಉತ್ತೇಜನ ಹೇಗೆ? :
ಐಟಿ ಮತ್ತು ತಂತ್ರಜ್ಞಾನದ ಉತ್ಪಾದನೆ, ನವೋದ್ಯಮ ವಿವಿಧ ವಲಯದಲ್ಲಿ ಬೆಳೆಯುತ್ತಲೇ ಇದೆ. ಈ ಕ್ಷೇತ್ರಕ್ಕೆ ಎಷ್ಟೇ ಜನ ಬಂದರೂ ಸ್ಥಳಾವಕಾಶದ ಕೊರತೆ ಆಗದು, ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ಸೈಬರ್ ಭದ್ರತೆ, ಏರೋಸ್ಪೇಸ್, ಸ್ಪೇಸ್, ವಿಜ್ಞಾನ ತಂತ್ರಜ್ಞಾನ , ಇ-ಕಾಮರ್ಸ್, ಲಾಜೆಸ್ಟಿಕ್ ಹೀಗೆ ಹಲವು ವಲಯಗಳಲ್ಲಿ ತಂತ್ರಜ್ಞಾನದ ಪ್ರಭಾವ ಹೆಚ್ಚಾಗುತ್ತಿದೆ. ಇದರ ಪರಿಣಾಮ ಉದ್ಯೋಗಾವಕಾ ಶವೂ ಹೆಚ್ಚಾಗುತ್ತದೆ.
ಬಯೋ ಎಕಾನಮಿ ಗುರಿ ಸಾಧನೆಗೆ ಇರುವ ಕಾರ್ಯಕ್ರಮವೇನು? :
ಬಿಟಿ ಮೂಲಕವೇ ರಾಜ್ಯ ಮತ್ತು ದೇಶದಲ್ಲಿ ಅನೇಕ ಪರಿಹಾರಗಳು ಬಂದಿವೆ. ಆಗ್ರೋ ಎಕಾನಮಿಯಲ್ಲಿ ಶೇ.35 ಷೇರು ಹೊಂದಿದ್ದೇವೆ. ಅದನ್ನು ಶೇ.50ಕ್ಕೆ ಏರಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಬಯೋ ಎಕಾನಮಿ ಉತ್ತೇಜನಕ್ಕೆ ಸಂಬಂಧಿಸಿದಂತೆ ಪ್ರಮುಖ ಆರು ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಬಯೋ ಉತ್ಪಾದನೆ. ವ್ಯಾಕ್ಸಿನ್, ಇಮಿನೋಲಜಿ, ಬಯೋ ರಿಫೈನರಿ, ಬಯೋ ತೈಲ ಇವುಗಳನ್ನೇ ಪ್ರಮುಖವಾಗಿಟ್ಟುಕೊಂಡು ಆಗ್ರೋ ಎಕಾನಮಿ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದ್ದೇವೆ.
ಟೆಕ್ ಸಮಿಟ್ನಲ್ಲಾದ ಒಪ್ಪಂದ ಅನುಷ್ಠಾನ ಹೇಗೆ? :
ಟೆಕ್ ಸಮಿಟ್ನಲ್ಲಿ ಪ್ರಮುಖ 8 ಒಪ್ಪಂದಗಳು ಆಗಿವೆ. ನವೋದ್ಯಮಕ್ಕೆ ಇನ್ನಷ್ಟು ಉತ್ತೇಜನ, ಕೃಷಿ, ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್, ಸೈಬರ್ ಭದ್ರತೆ ಹೀಗೆ ಹಲವು ಕ್ಷೇತ್ರವನ್ನು ಸಂಶೋಧನಾತ್ಮಕವಾಗಿ ಹಾಗೂ ಕೌಶಲ್ಯಾಧಾರಿತವಾಗಿ ಬಲ ಪಡಿಸುವ ನಿಟ್ಟಿನಲ್ಲಿ ಈ ಒಪ್ಪಂದಗಳಾಗಿದ್ದು, ಒಪ್ಪಂದವನ್ನು ನೇರವಾಗಿ ಸರ್ಕಾರ ಮಾಡಿಲ್ಲ. ಅನುಷ್ಠಾನಕ್ಕೆ ಯಾವುದೇ ಸಮಸ್ಯೆ ಆಗಬಾರದೆಂಬ ಸದುದ್ದೇಶದಿಂದ ನಮ್ಮಲ್ಲಿರುವ ಸೆಂಟರ್ ಫಾರ್ ಎಕ್ಸೆಲೆನ್ಸಿಗಳನ್ನು ಬಳಸಿಕೊಂಡು, ಬೇರೆ ಬೇರೆ ದೇಶದ ಇಂತಹ ಸಂಸ್ಥೆಗಳೊಂದಿಗೆ ಒಪ್ಪಂದ ನಡೆದಿದೆ. ಅನುಷ್ಠಾನದ ಪೂರ್ಣ ನಿರ್ವಹಣೆಯನ್ನು ಆ್ಯಂಕರಿಂಗ್ ಸಂಸ್ಥೆಗಳೇ ನೋಡಿಕೊಳ್ಳಲಿವೆ.
ಇದನ್ನೂ ಓದಿ : ರೋಶನ್ ಬೇಗ್ ನಮ್ಮ ಪಕ್ಷದಲ್ಲಿಲ್ಲ, ನಮಗೂ ಅವರಿಗೂ ಸಂಬಂಧವಿಲ್ಲ: ಸಿದ್ದರಾಮಯ್ಯ
ಟೆಕ್ ಸಮಿಟ್ ಬಿಯಾಂಡ್ ಬೆಂಗಳೂರುಕಲ್ಪನೆಗೆ ಹೇಗೆ ಸಹಕಾರಿಯಾಗಿದೆ? :
ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಐಟಿ-ಬಿಟಿ, ನವೋದ್ಯಮ ಎಲ್ಲೆಡೆ ವಿಸ್ತರಿಸಲು ಟೆಕ್ ಸಮಿಟ್ ಸಾಕಷ್ಟು ಸಹಕಾರಿಯಾಗಿದೆ. ಸಂಪರ್ಕ ಜಾಲ, ಮಾರುಕಟ್ಟೆ ವ್ಯವಸ್ಥೆ, ಸ್ಥಳಾವಕಾಶ, ಸೌಲಭ್ಯ ಕಲ್ಪಿಸುವ ಜತೆಗೆ ಸ್ಥಳೀಯವಾಗಿರುವ ಸಮಸ್ಯೆಗಳನ್ನು ಬಗೆಹರಿಸಬೇಕು. ವರ್ಕ್ ಫ್ರಂ ಹೋಂ ಪರಿಕಲ್ಪನೆ ಯಡಿಎಲ್ಲಿಂದಬೇಕಾದರೂಸೇವೆ ಸಲ್ಲಿಸಬಹುದಾದ ವ್ಯವಸ್ಥೆಗೆ ನಾವು ಒಗ್ಗಿಕೊಂಡಿದ್ದೇವೆ.
ಕೇಂದ್ರ ಸರ್ಕಾರದಿಂದಯಾವ ರೀತಿಯಲ್ಲಿ ಸಹಕಾರ ಬಯಸುತ್ತಿದ್ದೀರಿ? :
ಕೇಂದ್ರ ಸರ್ಕಾರದಿಂದ ಯಾವುದೇ ಸಂಸ್ಥೆ ಅಥವಾ ಕೇಂದ್ರ ತೆರೆಯಲು ಅನುಮತಿ ನೀಡಿದರೂ ಅದನ್ನು ಅನುಷ್ಠಾನಕ್ಕೆ ತರಲಿದ್ದೇವೆ. ಇದರಿಂದ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ.
ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಸಮಸ್ಯೆಗೆ ಪರಿಹಾರ ಹೇಗೆ? :
ಸಮಸ್ಯೆ ಬಗೆಹರಿಸಿ, ಸೌಲಭ್ಯದ ಉನ್ನತೀಕರಣಕ್ಕೆಕ್ರಮ ಆಗುತ್ತಿದೆ. ಟೆಲಿಕಾಂ ನೀತಿಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಮೂಲಕ ಸೌಲಭ್ಯ ಕಲ್ಪಿಸಲಿದ್ದೇವೆ.ಕೇಬಲ್ ಸಂಪರ್ಕದ ವಿಸ್ತರಣೆ ಸೇರಿದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ.
–ರಾಜುಖಾರ್ವಿ ಕೊಡೇರಿ