Advertisement

ಆಪರೇಷನ್‌ ಕಮಲದ ಅಗತ್ಯವೇ ಇಲ್ಲ,ಡಿಕೆಶಿ ಆರೋಪದಲ್ಲಿ ಹುರುಳಿಲ್ಲ ;BSY

03:13 PM Aug 08, 2018 | Team Udayavani |

ಬೆಂಗಳೂರು: ನಾನು ದೆಹಲಿಗೆ ವರಿಷ್ಠರೊಂದಿಗೆ ತುರ್ತು ಸಭೆಯಲ್ಲಿ ಭಾಗವಹಿಸಲು ತೆರಳಿದ್ದೆ ಹೊರತು ಆಪರೇಷನ್‌ ಕಮಲ ಮಾಡುವ ಸಲುವಾಗಿ ಅಲ್ಲ. ನಮಗೆ ಆಪರೇಷನ್‌ ಕಮಲ ಮಾಡುವ ಅಗತ್ಯ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. 

Advertisement

ಬುಧವಾರ ಡಾಲರ್ಸ್‌ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ದಿನೇಶ್‌ ಗುಂಡುರಾವ್‌ ಅವರ ಆರೋಪದಲ್ಲಿ ಹುರುಳಿಲ್ಲ ಎಂದರು. 

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ರಾಜ್ಯ ರಾಜಕೀಯದ ಕುರಿತಾಗಿ ಚರ್ಚೆ ನಡೆಸಿ ಬಂದಿದ್ದೇನೆ ಎಂದರು. 

ನಾವು ವಿಪಕ್ಷದಲ್ಲಿದ್ದುಕೊಂಡು ಸಮ್ಮಿಶ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು. 

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬರ ದ ಛಾಯೆ ಆವರಿಸಿದ್ದು, ನಾಳೆಯಿಂದ ಬೀದರ್‌ನಿಂದ ನಮ್ಮ ನಾಯಕರು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದೇವೆ. ಜನರ ಸಮಸ್ಯೆಗಳನ್ನು ಆಲಿಸುತ್ತೇವೆ. ರಾಜ್ಯದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಕೇಂದ್ರ ಸಚಿವರುಗಳ  ಜೊತೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next