Advertisement

ತಾರಸಿ ಕೃಷಿಗೆ ಗಿಡಗಳ ಆಯ್ಕೆ ಎಂಬುದೇ ಇಲ್ಲ !

01:51 PM Jul 09, 2021 | Team Udayavani |

ಮಂಗಳೂರು: ತಾರಸಿ ಕೃಷಿ ಮಾಡುವುದಾದರೆ ಗಿಡಗಳ ಆಯ್ಕೆಯಲ್ಲಿಯೂ ಜಾಣ್ಮೆ ಇರಬೇಕು. ಬೀಜ ಹಾಕಿ ಗಿಡ ಆಗುವ ಕಾಲಕ್ಕೂ ಒಂದಷ್ಟು ಸಿದ್ಧತೆ ಕೈಗೊಳ್ಳಲೇಬೇಕು. ಯಾವ ಕಾಲಕ್ಕೆ ಯಾವ ಗಿಡ ಎಂಬ ಬಗ್ಗೆ ಸಾಮಾನ್ಯ ಮಾಹಿತಿ ತಿಳಿದಿರಬೇಕು. ಯಾವುದು ಹೆಚ್ಚು ಪ್ರಶಸ್ತ್ಯ ಎಂಬುದನ್ನು ತಿಳಿಯಬೇಕು.

Advertisement

ತಾರಸಿ ಕೃಷಿಯನ್ನು ಕಳೆದ ಹಲವು ವರ್ಷಗಳಿಂದ ಯಶಸ್ವಿಯಾ ಗಿ ನಡೆಸುತ್ತಿರುವ ನಗರದ ಪಿಂಟೋಸ್‌ ಲೈನ್‌ ಸಮೀಪದ ಜಿ.ಪಿ. ಶೆಣೈ ಅವರು ತಾರಸಿ ಕೃಷಿಯ ಗಿಡಗಳ  ಆಯ್ಕೆ ಬಗ್ಗೆ ವಿವರ ನೀಡಿದ್ದಾರೆ.

  • ಹೂವಿನ ಗಿಡಗಳು, ಹಣ್ಣಿನ ಗಿಡಗಳು ಹಾಗೂ ತರಕಾರಿ ಗಿಡಗಳನ್ನು ತಾರಸಿಯಲ್ಲಿ ಬೆಳೆಯಲು ಅವಕಾಶವಿದೆ. ಇದರಲ್ಲಿ ಆಯ್ಕೆ ಎಂಬುದಿಲ್ಲ. ಮನಸ್ಸಿಟ್ಟು ಮಾಡುವುದಾದರೆ ಯಾವುದನ್ನೂ ತಾರಸಿಯಲ್ಲಿ ಬೆಳೆಯಬಹುದು. ಕಾಳಜಿಯಿಂದ ಮಾಡುವ ಮನಸ್ಸು ಮಾಡಿದರೆ ಎಲ್ಲ ಗಿಡಗಳು ತಾರಸಿಯಲ್ಲಿ ಜೀವಸ್ವರೂಪ ಪಡೆಯುತ್ತದೆ.
  • ಹಲಸು ಹಾಗೂ ತೆಂಗಿನ ಗಿಡವನ್ನು ಹೊರತುಪಡಿಸಿ ಎಲ್ಲವನ್ನೂ ಬೆಳೆದಿದ್ದೇನೆ. ಫಲ ಉಂಡಿದ್ದೇನೆ. ಮಾವಿನ ಹಣ್ಣಿನ ಗಿಡಗಳನ್ನು ಬೆಳೆದಿದ್ದೇನೆ. ಸೀತಾಫಲ, ಪಪ್ಪಾಯಿ, ಅನಾನಸು, ಸೀತಾಫಲ ಬೆಳೆದಿದ್ದೇನೆ. ದೀವಿ ಹಲಸು (ಜೀಗುಜ್ಜೆ)ಕೂಡ ಬೆಳೆಯುತ್ತಿದ್ದೇನೆ. ಹೀಗಾಗಿ ಇಂತಹುದೇ ಗಿಡಗಳು ಆಗಬೇಕು; ಇದು ಆಗುವುದಿಲ್ಲ ಎಂಬ ವಿಂಗಡನೆಯ ಆವಶ್ಯಕತೆಯೇ ಇರುವುದಿಲ್ಲ. 2003ರಿಂದ ಇಲ್ಲಿಯವರೆಗೆ ಇಂತಹ ಎಲ್ಲ ಪ್ರಯೋಗವನ್ನು ತಾನು ನಡೆಸುತ್ತಾ ಬಂದಿರುವ ಕಾರಣದಿಂದ ನಾನೇ ಇದಕ್ಕೆ ಉದಾಹರಣೆ. ಎಲ್ಲೂ ಸೋಲಾಗಲಿಲ್ಲ ಎನ್ನುತ್ತಾರೆ ಶೆಣೈ.
  • ಇದೇ ತಿಂಗಳಲ್ಲಿ ಗಿಡ ನೆಡಬೇಕು/ಇದೇ ಸಮಯಕ್ಕೆ ಬೀಜ ಹಾಕಬೇಕು ಎಂಬ ನಿಯಮದ ಬಗ್ಗೆ ಪೂರ್ವಜರು ತಿಳಿಸುತ್ತಿದ್ದರು. ಆದರೆ ಇದನ್ನು ಪರಿಗಣಿಸಲೇಬೇಕಾದ ಅಗತ್ಯವಿಲ್ಲ. ವರ್ಷ ಪೂರ್ತಿಯೂ ಗಿಡ ನೆಡುವ ಹಾಗೂ ಅದರ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. ಹೀಗಾಗಿ ಇಂತಹುದೇ ಸಮಯದಲ್ಲಿ ಗಿಡ ನೆಡಬೇಕು ಎಂಬ ಸೂತ್ರ ಪಾಲನೆ ಅನಿವಾರ್ಯವಲ್ಲ.
  • ಮಳೆಗಾಲದಲ್ಲಿ ಗಿಡಗಳ ಆರೈಕೆ ಸಾಮಾನ್ಯವಾಗಿ ಸುಲಭ. ನೀರಿನ ಪೂರೈಕೆಗೆ ಕಷ್ಟಪಡಬೇಕಾಗಿಲ್ಲ. ಆದರೆ ಮಳೆ ನೀರು ಗಿಡಗಳ ಅಗತ್ಯಕ್ಕಿಂತ ಜಾಸ್ತಿ ನಿಲ್ಲದಂತೆ ನೋಡಬೇಕು. ತಾರಸಿಯಲ್ಲಿ ನೀರು ಲೀಕೇಜ್‌ ಆಗದಂತೆ “ವಾಟರ್‌ ಫ್ರೂಫ್‌’ ಕ್ರಮ ಮಾಡಬೇಕು. ಉಳಿದಂತೆ ಬೇಸಗೆ, ಮಳೆಗಾಲ ಎಂಬ ಲೆಕ್ಕಾಚಾರ ಮಾಡುವ ಅಗತ್ಯವಿಲ್ಲ. ಎಲ್ಲ ಸಮಯವೂ ಸೂಕ್ತ. ಕೆಲವೊಂದು ಊರಿನ ತಳಿಗಳು ಆಯಾ ಕಾಲಕ್ಕೆ ತಕ್ಕಂತೆ ಇರುವುದಾಗಿ ಹೇಳುತ್ತಾರೆ. ಹೈಬ್ರಿಡ್‌ ತಳಿಗಳಿದಾರೆ ಈ ಸಮಸ್ಯೆ ಇಲ್ಲ. ಹೀಗಾಗಿ ಸಮಯದ ಲೆಕ್ಕಾಚಾರ ಬೇಡ. ಮನಸ್ಸಿಟ್ಟು ಕೆಲಸ ಮಾಡಿದರೆ ಎಲ್ಲ ಸಮಯವೂ ಗಿಡ ಬೆಳೆಯಲು ಪ್ರಶಕ್ತ.
  • ಸಾಮಾನ್ಯವಾಗಿ 800 ಚದರ ಅಡಿಯ ತಾರಸಿಯಲ್ಲಿ ಹೆಚ್ಚಾ ಕಡಿಮೆ 100 ಗಿಡ ನೆಡಲು ಅವಕಾಶವಿದೆ. ಬೀಜ ಮಂಗಳೂರಿನ ಸಾಹಿತ್ಯ ಕೇಂದ್ರ, ನಗರದ ಕೆಲವು ಅಂಗಡಿಯಲ್ಲಿ, ನರ್ಸರಿಗಳಲ್ಲಿ, ಕೃಷಿ ಮೇಳದಲ್ಲಿ ದೊರೆಯುತ್ತದೆ. ಅಂದಹಾಗೆ ಬೇರೆ ಬೇರೆ ಗಿಡಗಳು ಬೇರೆ ಬೇರೆ ಸಮಯಕ್ಕೆ ಫಲ ನೀಡುತ್ತದೆ. ಬೆಂಡೆ, ಬದನೆ, ತೊಂಡೆ ಸೇರಿದಂತೆ ಬಹುತೇಕ ತರಕಾರಿಗಳು ಒಂದು ತಿಂಗಳೊಳಗೆ ಹೂ ಬಿಟ್ಟು ತರಕಾರಿ ಸಿಗಲಿದೆ.
Advertisement

Udayavani is now on Telegram. Click here to join our channel and stay updated with the latest news.

Next