Advertisement

ಕಾಂಗ್ರೆಸ್‌ ಟಿಕೆಟ್‌ ಸಿಗುವ ವಿಶ್ವಾಸವಿದೆ: ಶ್ರೀನಿವಾಸ್‌

11:18 AM Apr 08, 2018 | |

ತರೀಕೆರೆ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಲಿದ್ದೇನೆ ಎಂದು ಶಾಸಕ ಜಿ.ಎಚ್‌.ಶ್ರೀನಿವಾಸ್‌ ಹೇಳಿದರು. ಅವರು ಸಮೀಪದ ಗಂಜಿಗೆರೆ ಗ್ರಾಮದಲ್ಲಿ ಮತದಾರರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು. ಬಾವಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಕೋಟಿಗೂ ವೆಚ್ಚದ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಗ್ರಾಮಕ್ಕೆ ಡಿಪ್ಲೋಮ ಕಾಲೇಜು ಮಂಜೂರು ಮಾಡಿಸಲಾಗಿದೆ, 1350 ಜನರಿಗೆ ವಿವಿಧ ವೇತನಗಳನ್ನು ನೀಡಲಾಗಿದೆ ಎಂದರು.

Advertisement

ಸದಸ್ಯೆ ಗೀತಾ ಮಾತನಾಡಿ, ಕ್ಷೇತ್ರಕ್ಕೆ ಹಲವಾರು ಜನ ಶಾಸಕರಾದರು ಗಂಜಿಗೆರೆ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡುವಲ್ಲಿ ವಿಫಲರಾಗಿದ್ದರು, ಶಾಸಕ ಜಿ.ಎಚ್‌.ಶ್ರೀನಿವಾಸ್‌ ತಮ್ಮ ಅವಧಿಯಲ್ಲಿ ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಿದ್ದಾರೆ ಎಂದರು. ಪ್ರಚಾರ ಸಭೆಯಲ್ಲಿ ಹೋಬಳಿ ಕಾಂಗ್ರೆಸ್‌ ಅಧ್ಯಕ್ಷ ಎಚ್‌. ಎನ್‌.ಮಂಜುನಾಥ್‌, ಮಾಜಿ ತಾ.ಪಂ ಸದಸ್ಯ ಸೀತಾರಾಮ್‌, ಶಿವಕುಮಾರ್‌, ಬಾವಿಕೆರೆ ಗಾ.ಪಂ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಭಾಗ್ಯಮ್ಮ, ಉಪೇಂದ್ರ, ಸಮೀಉಲ್ಲಾ, ಶೋಭಾ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next