Advertisement

“ನಾಯಕರೆಲ್ಲ ಮಂಡಿಯೂರಿದರೂ ಕ್ಯಾರೇ ಅಂದಿಲ್ಲ’

11:06 PM Apr 23, 2019 | Team Udayavani |

ಗೋಕಾಕ: “ರಮೇಶ ಜಾರಕಿಹೊಳಿ ಅವರ ಮನವೊಲಿಸಲು ರಾಹುಲ್‌ ಗಾಂಧಿ ಅಷ್ಟೇ ಅಲ್ಲದೇ ಸಿದ್ದರಾಮಯ್ಯ, ಪರಮೇಶ್ವರ್‌, ವೇಣುಗೋಪಾಲ ಸೇರಿ ಕಾಂಗ್ರೆಸ್‌ನ ಎಲ್ಲ ನಾಯಕರು ಅವರ ಮುಂದೆ ಮಂಡಿಯೂರಿದ್ದರೂ ಅವರು ಕ್ಯಾರೇ ಅನ್ನಲಿಲ್ಲ, ಪತ್ರ, ಫೋನ್‌ನಲ್ಲಿ ಖುದ್ದು ಹುಡುಕಿ ಹುಡುಕಿ ಸಾಕಾಗಿ ಹೋಗಿದೆ. ರಮೇಶ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಇನ್ನೇನೂ ಉಳಿದಿಲ್ಲ’ ಎಂದು ಸಚಿವ ಸತೀಶ ಜಾರಕಿಹೊಳಿ ಖಾರವಾಗಿ ಪ್ರತಿಕ್ರಿಯಿಸಿದರು.

Advertisement

ಶುಕ್ರವಾರ ಸಂಜೆ ನಗರದ ಜಿಆರ್‌ಬಿಸಿ ಕಾಲೋನಿಯ 161 ಮತಗಟ್ಟೆಯಲ್ಲಿ ಮತ ಚಲಾಯಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಮೇಶ ಪಕ್ಷ ಬಿಡುವುದಾದರೆ ಬಿಡಲಿ. ನಿರ್ಧಾರ ಯಾವುದೇ ಆಗಿದ್ದರೂ ಬೇಗನೆ ತೆಗೆದುಕೊಳ್ಳಲಿ ಎಂದು ಹೇಳಿದರು.

ನಮ್ಮ ಕುಟುಂಬದ ಸಮಸ್ಯೆ ಬಾಲಚಂದ್ರ ಜಾರಕಿಹೊಳಿ ಅವರಿಗೆ ಗೊತ್ತಿದ್ದು ಸಮಸ್ಯೆಯ ಪ್ರಾರಂಭಿಕ ಹಂತದಲ್ಲಿಯೇ ಸ್ಪಂದಿಸಬೇಕಾಗಿತ್ತು. ಈಗ ಕಾಲ ಮಿಂಚಿದೆ. ಈ ಹೋರಾಟ ಪಕ್ಷಕ್ಕಾಗಿ ನಡೆದಿದ್ದು, ವೈಯಕ್ತಿಕವಾಗಿ ಅಲ್ಲ. ಮಗುವನ್ನು ಆಟವಾಡಿಸಲು ಬಂದ ಅಂಬಿರಾವ ಪಾಟೀಲ ಇಂದು ಎಲ್ಲರನ್ನೂ ಆಟವಾಡಿಸುತ್ತಿದ್ದಾನೆಂದು ಸಿಡಿಮಿಡಿಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next