Advertisement
ಈ ಮಾತನ್ನು ಹೇಳುವಾಗ ಪದ್ಮಶ್ರೀ ಸೀತವ್ವ ಜೋಡಟ್ಟಿ ಧ್ವನಿ ನಡುಗುತ್ತಿತ್ತು. ಅವರ ಮಾತಿನಲ್ಲಿ ದುಃಖ ತೇಲಿ ಬಂತು. ಒಂದಿಷ್ಟು ಮೌನದ ಮತ್ತೆ ಗಟ್ಟಿ ಧ್ವನಿಯಲ್ಲಿ ಮಾತು ಆರಂಭಿಸಿದ ಸೀತವ್ವ, ಆದ್ರ ಇವತ್ತ ಅದ ಊರಿನ ಮಂದಿ ನಾನ ಹೋದರ ಎದ್ದು ನಿಂತು ಗೌರವ ಕೊಟ್ಟು, ಕೈ ತುತ್ತು ತಿನಿಸಿ ಪ್ರೀತಿ ತೋರಿಸ್ತಾರ. ನನಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ? ಪದ್ಮಶ್ರೀ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ “ಉದಯವಾಣಿ’ಯೊಂದಿಗೆ ದೂರವಾಣಿ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡ ಸೀತವ್ವ,ಏಳು ವರ್ಷದವಳಿದ್ದಾಗಲೇ ಒಬ್ಬ ದೇವದಾಸಿಯಾಗಿದ್ದ ನಾನು ನನ್ನ ಇಡೀ ಜೀವನವನ್ನೇ ಆಅನಿಷ್ಟ ಪದ್ಧತಿಗೆ ಬಲಿಕೊಡಬೇಕಾಯಿತು. ಯಾರೂ ಪಡಲಾರದ ಕಷ್ಟಗಳನ್ನು ಅನುಭವಿಸಿದೆ.ನನ್ನ ಕಷ್ಟಗಳು ಇನ್ನೊಂದು ಹೆಣ್ಣಿಗೆ ಆಗಬಾರದು ಎಂದು ಸಂಘ ಕಟ್ಟಿಕೊಂಡು ದೇವದಾಸಿ ಪದ್ಧತಿ ವಿರುದ್ಧ ಜಾಗೃತಿ ಆರಂಭಿಸಿದೆ. ಈ ಪದ್ಮಶ್ರೀ ಪ್ರಶಸ್ತಿ ಅಂದು ನಾನು ಗಟ್ಟಿ ಮನಸ್ಸು ಮಾಡಿ ಹೋರಾಟಕ್ಕೆ ಇಳಿದಿದ್ದರ ಪ್ರತಿಫಲವೇ ಆಗಿದೆ ಎಂದು ತಮ್ಮ ಯಶೋಗಾಥೆ ಬಿಚ್ಚಿಟ್ಟರು.
ಯಾಗುವ ಹದಿಹರೆಯದ ಹುಡುಗಿಯರನ್ನು ಪಕ್ಕಕ್ಕೆ ಎಳೆದುಕೊಂಡು ಹೋಗಿ ದೇವದಾಸಿ ಪದ್ಧತಿಯ ಅನಿಷ್ಟಗಳನ್ನು ಮನವರಿಕೆ ಮಾಡಿಕೊಟ್ಟೆ. ಆಗ ಎಷ್ಟೋ ಹುಡುಗಿಯರು ತಮ್ಮ ಕುಟುಂಬದವರ ಕಣ್ಣು ತಪ್ಪಿಸಿ ಅಲ್ಲಿಂದ ಕಾಲು ಕಿತ್ತರು.ನಂತರ ಎಷ್ಟೋ ಹುಡುಗಿಯರು ದೇವದಾಸಿಯಾದ ಮೇಲೆ ನನ್ನನ್ನು ಹುಡುಕಿಕೊಂಡು ಬಂದು ಈ ಪದ್ಧತಿಯಿಂದ ಹೊರಗೆ ಬಂದರು.ಆಗ ಕೆಲವರು ನೀನು ಎಲ್ಲಿಯವಳೇ? ದೇವರ ಪದ್ಧತಿ ವಿರುದ್ಧ ಮಾತನಾಡುತ್ತಿ, ಯಲ್ಲಮ್ಮನ್ನೇ ಎದುರು ಹಾಕಿಕೊಳ್ಳುತ್ತಿಯಾ ಎಂದು ನನ್ನನ್ನು ಹೆದರಿಸಿ ಏಟು ಕೊಟ್ಟರು. ಆದರೆ ಅಂಜದೆ ಈ ಕೆಲಸ ಮಾಡಿ ಸೈ ಎನಿಸಿಕೊಂಡೆ. ಆಗ ಯಲ್ಲಮ್ಮನ ಗುಡ್ಡಕ್ಕೆ ಹೋದರೆ ನನ್ನನ್ನು ನೋಡಿ ಶಾಪ ಹಾಕಿ ಹಲ್ಲೆ ನಡೆಸುತ್ತಿದ್ದವರೇ ಈಗ ಊಟ, ವಸತಿ ವ್ಯವಸ್ಥೆ ಮಾಡಿ ಸಹಕಾರ ನೀಡುತ್ತಿದ್ದಾರೆ. ಇದನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಸೀತವ್ವ ಜೋಡಟ್ಟಿ.
Related Articles
Advertisement
ಕೆಕ್ಕರಿಸಿಕೊಂಡು ನೋಡುವವರಿಗೆ ಅಂಜದೆ, ಕುತಂತ್ರಿ ಗಳಿಗೆ ಮಣಿಯದೆ, ದಿಟ್ಟತನದಿಂದ ದೇವದಾಸಿ ಪದ್ಧತಿ ವಿರುದ್ಧ ಜಾಗೃತಿ ಮಾಡುತ್ತ ಬಂದಿದ್ದೇನೆ.– ಸೀತವ್ವ ಜೋಡಟ್ಟಿ, ಸಾಮಾಜಿಕ ಕಾರ್ಯಕರ್ತೆ