Advertisement

ಆಗ ಬತ್ತಿ; ಈಗ ಟೀಸರ್‌

11:55 AM Nov 03, 2017 | Team Udayavani |

ಕಳೆದ ವಾರವಷ್ಟೇ “ಸುರ್‌ಸುರ್‌ ಬತ್ತಿ’ ಚಿತ್ರತಂಡದವರು ತಮ್ಮ ಚಿತ್ರದ ಬಗ್ಗೆ ಮಾತನಾಡಿ ಹೋಗಿದ್ದರು. ಈಗ ಅದೇ ತಂಡದವರು ಇನ್ನೊಮ್ಮೆ ಮಾಧ್ಯಮಗಳೆದುರು ಬಂದರು. ಈ ಬಾರಿ ಬರುವುದಕ್ಕೆ ಕಾರಣ, ಟೀಸರ್‌ ಬಿಡುಗಡೆ. ಕುಂಬಳಗೋಡಿನಲ್ಲಿರುವ ದಿ ಗಾರ್ಡನ್‌ ಏಷ್ಯಾ ರೆಸಾರ್ಟ್‌ನಲ್ಲಿ ಟೀಸರ್‌ ಬಿಡುಗಡೆಯಾಯಿತು. ಟೀಸರ್‌ ಬಿಡುಗಡೆ ಮಾಡುವುದಕ್ಕೆ ಪ್ರಥಮ್‌ ಬಂದಿದ್ದರು. ಮಿತ್ರ, ತಬಲಾ ನಾಣಿ ಮುಂತಾದವರು ಇದ್ದರು.

Advertisement

ಮೊದಲಿಗೆ ಮಾತನಾಡಿದ ನಿರ್ದೇಶಕ ಮುಗಿಲನ್‌, ಚಿತ್ರದ ಬಗ್ಗೆ ತಾವು ಮಾತನಾಡುವುದಕ್ಕಿಂತ, ಎಲ್ಲರೂ ಬಂದು ಚಿತ್ರಮಂದಿರದಲ್ಲಿ ನೋಡಿ ಎಂದು ಆಹ್ವಾನ ಕೊಟ್ಟರು. ಆರ್ವ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ನಿರ್ಮಾಪಕ ಕುಮಾರ್‌ ಸಂಪೂರ್ಣ ಸ್ವಾತಂತ್ರ್ಯ ನೀಡಿದರಂತೆ. ನಿರ್ಮಾಪಕರ ಈ ಔದಾರ್ಯವನ್ನು ಮುಗಿಲನ್‌ ಮೆಚ್ಚಿದರು.

ಆರ್ವ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡುವ ಮುನ್ನ ಹಲವರು ಕುಹಕ ಮಾಡಿದರಂತೆ. ಅದನ್ನು ಖುದ್ದು ಆರ್ವ ಹೇಳಿಕೊಂಡರು. “ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ನಾನು ನಾಯಕನಾಗುವ ಅವಕಾಶ ಬಂದಾಗ, ಕೆಲವರಿಂದ ಕುಹಕದ ಮಾತುಗಳು ಕೇಳಿಬಂದವು. ಇದಕ್ಕೆ ಕ್ಯಾರೆ ಎನ್ನದ ನಿರ್ಮಾಪಕ-ನಿರ್ದೇಶಕರು ಧೈರ್ಯದಿಂದ ಚಿತ್ರ ಮುಗಿಸಿದ್ದಾರೆ. 12 ವರ್ಷದ ಪರಿಶ್ರಮದಿಂದ ಈ ವೇದಿಕೆ ಮೇಲೆ ನಿಂತಿದ್ದೇನೆ’ ಎಂದು ಭಾವುಕರಾದರು ಆರ್ವ.

“ಗಂಡನಿಗೆ ಹೆಂಡತಿ, ಮಕ್ಕಳಿಗೆ ತಾಯಿ ಹೇಗೋ, ನಮಗೆ ನೀವುಗಳು’ ಎಂದು ಮಾಧ್ಯಮದವರನ್ನು ಕೊಂಡಾಡಿದರು ಪ್ರಥಮ್‌. “ನಿಮ್ಮನ್ನೇ ನಂಬಿಕೊಂಡಿದ್ದೇವೆ. ನಿರ್ಮಾಪಕರಿಗೆ ಹಾಕಿದ ಬಂಡವಾಳ ಮೂರರಷ್ಟು ವಾಪಸ್ಸು ಬರಲಿ’ ಎಂದು ಪ್ರಥಮ್‌ ಶುಭ ಹಾರೈಸಿದರು. ಇನ್ನು ಟೈಟಲ್‌ ಕೇಳಿದರೆ ಸಂಭ್ರಮವಾಗುತ್ತದೆ ಎಂದವರು ಮಿತ್ರ. “ಈ ಚಿತ್ರದಲ್ಲಿ ಒಳ್ಳೆಯ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಹಣಕಾಸಿನ ಸಹಾಯ ಮಾಡಿಲ್ಲ. ಮಾನಸಿಕ ಗುರುವಾಗಿ ಸಲಹೆ ನೀಡಿದ್ದೇನೆ’ ಎಂದರು ಮಿತ್ರ.

Advertisement

Udayavani is now on Telegram. Click here to join our channel and stay updated with the latest news.

Next