Advertisement

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

06:27 PM Apr 24, 2024 | Team Udayavani |

ಬೈಂದೂರು: ಶಿರೂರು ಗ್ರಾಮದ ಕೆಳಪೇಟೆಯಲ್ಲಿರುವ ಜ್ಯುವೆಲ್ಲರಿ ವರ್ಕ್ಸ್ ಅಂಗಡಿಯ ಬೀಗ ಮುರಿದ ಕಳ್ಳರು ಹಳೇ ಬೆಳ್ಳಿ ಸಾಮಗ್ರಿ ಮತ್ತು ನಗದನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.

Advertisement

ಬೆಳಗ್ಗೆ ಅಂಗಡಿಯ ಮಾಲಕರು ನೋಡಿದಾಗ ಕಳ್ಳತನ ನಡೆದಿರುವುದು ಕಂಡು ಬಂದಿದೆ. ಯಾರೋ ಕಳ್ಳರು ಶಟರ್‌ ಬಾಗಿಲನ್ನು ಮುರಿದು ಅಂಗಡಿಯ ಒಳ ಪ್ರವೇಶಿಸಿ ಕ್ಯಾಶ್‌ ಕೌಂಟರ್‌ ನಲ್ಲಿ ಇಟ್ಟಿದ್ದ 40 ಸಾವಿರ ರೂ. ನಗದು ಹಾಗೂ ಅಂಗಡಿಯಲ್ಲಿಟ್ಟಿದ್ದ ಹಳೆಯ ಬೆಳ್ಳಿ ಜ್ಯುವೆಲ್ಲರಿ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next