Advertisement

Uppala ರೈಲ್ವೇ ಇಲಾಖೆಯ ಸ್ಥಳದಿಂದ ಮರ ಕಳವು : ಆರೋಪಿ ಬಂಧನ

10:19 PM Apr 17, 2024 | Team Udayavani |

ಉಪ್ಪಳ: ಮಂಜೇಶ್ವರದಲ್ಲಿ ರೈಲ್ವೇ ಇಲಾಖೆಯ ಸ್ಥಳದಿಂದ ತೇಗಿನ ಮರ ಕಡಿದು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಗ್ರಮಂಜೇಶ್ವರ ಚೆಕ್‌ಪೋಸ್ಟ್‌ ಬಳಿಯ ರಹ್ಮತ್‌ ಮಂಜಿಲ್‌ ನಿವಾಸಿ ಮೊನುದ್ದೀನ್‌ ಶಿಹಾದ್‌ ಸಿ.ಎ. (32)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

Advertisement

ಕಳೆದ ಮಾರ್ಚ್‌ 10 ಹಾಗೂ 13ರ ಮಧ್ಯೆ ಮಂಜೇಶ್ವರ ಚೆಕ್‌ಪೋಸ್ಟ್‌ ಬಳಿಯಲ್ಲಿ ರೈಲ್ವೇ ಇಲಾಖೆಯ ಸ್ವಾಧೀನದಲ್ಲಿರುವ ಸ್ಥಳದಿಂದ ತೇಗಿನ ಮರ ಕಳವು ಮಾಡಲಾಗಿದೆ.

ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 6 ಲಕ್ಷ ರೂ. ವಶಕ್ಕೆ
ಕಾಸರಗೋಡು: ಸರಿಯಾದ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 6 ಲಕ್ಷ ರೂ.ಗಳನ್ನು ಅಂಬಲತ್ತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗುರುಪುರದಿಂದ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಫ್ಲೆಯಿಂಗ್‌ ಸ್ಕ್ವಾಡ್‌(1) ಎಕ್ಸಿಕ್ಯೂಟಿವ್‌ ಮೆಜಿಸ್ಟ್ರೇಟ್‌ ಕೆ. ರಮೇಶ್‌ ಮತ್ತು ಎಸ್‌.ಐ. ಮಧುಸೂದನನ್‌ ಮಡಿಕೈ ಇವರ ನೇತೃತ್ವದಲ್ಲಿ ವಶಪಡಿಸಲಾಗಿದೆ. ಪಡನ್ನಕ್ಕಾಡ್‌ ನಿವಾಸಿ, ಅಂಬಲತ್ತರ ಪೊಲೀಸ್‌ ಠಾಣೆಯ ಪರಿಸರದಲ್ಲಿ ವಾಸಿಸುವ ಮೊದು ಅವರ ಕಾರಿನಿಂದ ಹಣ ವಶಪಡಿಸಲಾಗಿದೆ. ಹಣವನ್ನು ಕಾಂಞಂಗಾಡ್‌ ಸಬ್‌ ಟ್ರಶರಿಯಲ್ಲಿರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next