Advertisement

Sullia ಮನೆಯಿಂದ ನಗ, ನಗದು ಕಳವು

12:38 AM May 01, 2024 | Team Udayavani |

ಸುಳ್ಯ: ಮನೆಮಂದಿ ಕೆಲಸಕ್ಕೆ ತೆರಳಿದ್ದ ವೇಳೆ ಬಾಗಿಲು ಮುರಿದು ಚಿನ್ನಾಭರಣ ಹಾಗೂ ನಗದು ಕಳವುಗೈದಿರುವುದಾಗಿ ಸುಳ್ಯ ಕಸಬಾ ಗ್ರಾಮದ ಕೆಎಫ್‌ಡಿಸಿ ಕ್ವಾಟ್ರಸ್‌ನ ನಾಚಪ್ಪ ಎ.ಸಿ. ಅವರು ಎ. 29ರಂದು ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

2 ಗ್ರಾಂ ತೂಕದ ಹಳೆಯ ಬೆಂಡೋಲೆ 1 ಜೊತೆ, ತಲಾ 2 ಗ್ರಾಂ ತೂಕದ ಹಳೆಯ ಚಿನ್ನದ ಉಂಗುರ 2, 8 ಗ್ರಾಂ ತೂಕದ ಹಳೆಯ ಚಿನª ತಾಳಿ ಚೈನು, 2 ಗ್ರಾಂ ತೂಕದ ಹಳೆಯ ಚಿನ್ನದ ಸರ, 30 ಸಾವಿರ ರೂ. ನಗದು ಕಳವುಗೈದಿದ್ದಾರೆ. ಒಟ್ಟು ಸುಮಾರು 94 ಸಾವಿರ ರೂ. ಮೌಲ್ಯದ ನಗ-ನಗದು ಕಳವಾಗಿದೆ.

ಬಡ್ಡಕಟ್ಟೆ: ಮಟ್ಕಾ ಅಡ್ಡೆಗೆ ದಾಳಿ
ಬಂಟ್ವಾಳ: ಬಂಟ್ವಾಳದ ಬಡ್ಡಕಟ್ಟೆಯಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಪೊಲೀಸರು ನಗದು ವಶಪಡಿಸಿಕೊಂಡು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪಾಣೆಮಂಗಳೂರು ನಿವಾಸಿ ಗುರುರಾಜ್‌ ಹಾಗೂ ಮಂಜೇಶ್ವರ ಕುಂಜತ್ತೂರು ನಿವಾಸಿ ಚಿದನ್‌ ಆರೋಪಿಗಳಾಗಿದ್ದಾರೆ. ಬಡ್ಡಕಟ್ಟೆಯಲ್ಲಿ ಓಡಾಡುವ ವಾಹನಗಳ ನೋಂದಣಿ ಸಂಖ್ಯೆಯ ಆಧಾರದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿರುವ ಕುರಿತು ಬಂದ ಮಾಹಿತಿಯಂತೆ ಬಂಟ್ವಾಳ ನಗರ ಠಾಣಾ ಪಿಎಸ್‌ಐ ರಾಮಕೃಷ್ಣ ನೇತೃತ್ವದ ತಂಡ ದಾಳಿ ನಡೆಸಿತ್ತು. 2,260 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next