Advertisement

ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಹಣ-ಚಿನ್ನದ ಸರ ಕಳುವು: ದೂರು

08:01 PM Apr 09, 2023 | Pranav MS |

ಶಿವಮೊಗ್ಗ: ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನದ ಸರ ಮತ್ತು ನಗದು ಕಳ್ಳತನ ಮಾಡಲಾಗಿದೆ. ಬಸ್‌ನಲ್ಲಿ ಟಿಕೆಟ್‌ ಪಡೆದು ಹಣಕೊಡಲು ವ್ಯಾನಿಟಿ ಬ್ಯಾಗ್‌ ತೆಗೆದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

Advertisement

ಪದ್ಮಾವತಿರಾವ್‌ ಎಂಬುವವರು ಉಡುಪಿಯಲ್ಲಿ ಮನೆ ದೇವರ ಪೂಜೆ ಮುಗಿಸಿ ಖಾಸಗಿ ಬಸ್ಸಿನಲ್ಲಿ ಶಿವಮೊಗ್ಗಕ್ಕೆ ಬಂದಿದ್ದರು. ಇಲ್ಲಿಂದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ತಮ್ಮೂರು ಹಾವೇರಿ ಜಿಲ್ಲೆ ಹಿರೇಕೆರೂರಿನ ಹಂಸಬಾವಿಗೆ ಹೊರಟಿದ್ದರು. ಬಸ್‌ನಲ್ಲಿ ಟಿಕೆಟ್‌ಗೆ ಹಣಕೊಡಲು ವ್ಯಾನಿಟಿ ಬ್ಯಾಗ್‌ ತೆಗೆದಾಗ ಕಳ್ಳತನವಾಗಿರುವುದು ತಿಳಿದಿದೆ.

ವ್ಯಾನಿಟಿ ಬ್ಯಾಗಿನಲ್ಲಿದ್ದ 15 ಸಾವಿರ ರೂ. ನಗದು, 33 ಗ್ರಾಂ ತೂಕದ ಬಂಗಾರದ ಅವಲಕ್ಕಿ ಸರ ಕಳ್ಳತನವಾಗಿದೆ. ಸರದ ಮೌಲ್ಯ 1.32 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಎಲ್ಲೆಡೆ ಹುಡುಕಾಡಿದ ಬಳಿಕ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣ ದಾಖಲಾಗಿದೆ.
———————-¬¬¬¬¬
ಗಾಂಜಾ ಮಾರಾಟ; ಮೂವರ ಬಂಧನ
ಶಿವಮೊಗ್ಗ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಹೊಳೆಹೊನ್ನೂರು ರಸ್ತೆಯ ಲಕ್ಷ್ಮಿ ಸಾಮಿಲ್‌ ಬಳಿ ಪೊಲೀಸರು ದಾಳಿ ನಡೆಸಿದ್ದಾರೆ.

ಸೀಗೆಬಾಗಿಯ ರೋಷನ್‌, ವೀರಾಪುರದ ಮೊಹಮ್ಮದ್‌ ಇಬ್ರಾಹಿಂ ಮೀರ ಅಲಿಯಾಸ್‌ ಟಕ್ಕರ್‌, ಭದ್ರಾ ಕಾಲೋನಿಯ ಮಂಜುನಾಥ್‌ ಅಲಿಯಾಸ್‌ ಕ್ಯಾತೆ ಬಂ ಧಿತರು. ಆರೋಪಿಗಳಿಂದ 7 ಸಾವಿರ ರೂ. ಮೌಲ್ಯದ 195 ಗ್ರಾಂ ಒಣ ಗಾಂಜಾ, 690 ರೂ. ನಗದು, ಕೃತ್ಯಕ್ಕೆ ಬಳಸಿದ್ದ ಬೈಕ್‌ ವಶಪಡಿಸಿಕೊಳ್ಳಲಾಗಿದೆ. ಭದ್ರಾವತಿ ಹಳೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next