Advertisement

Theft: ಕೂಡಲಿ ಶಾರದಾ ಪೀಠದಲ್ಲಿದ್ದ 60 ಲಕ್ಷ ರೂ. ಮೌಲ್ಯದ ಸುವರ್ಣ ಪಾದುಕೆಗಳು ಕಾಣೆ

01:16 AM Aug 23, 2024 | Esha Prasanna |

ಹೊಳೆಹೊನ್ನೂರು: ಕೂಡಲಿ ಗ್ರಾಮದ ಕೂಡಲಿ ಶ್ರೀ ಶೃಂಗೇರಿ ಮಹಾ ಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿದ್ದ ಸುಮಾರು 60 ಲಕ್ಷ ರೂ. ಮೌಲ್ಯದ ಸುವರ್ಣ ಪಾದುಕೆ ಹಾಗೂ ಬೆಳ್ಳಿಯ ಮುದ್ರೆಗಳು ಕಾಣೆಯಾಗಿವೆ.

Advertisement

ಈ ಕುರಿತು ವ್ಯವಸ್ಥಾಪಕ ರಮೇಶ್‌ ಹುಲುಮನಿ ಸ್ಥಳೀಯ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಪೀಠಾ ಧಿಪತಿಗಳಾದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮೀಜಿ ಅವರು ಹಿಂದಿನ ಚಾತುರ್ಮಾಸ್ಯ ಹಾಗೂ ಅನಂತರ ದಿನಗಳಲ್ಲಿ ಅನಾರೋಗ್ಯದಿಂದ ದಾವಣಗೆರೆ ಶಾಖಾ ಮಠ ಹಾಗೂ ಬೆಂಗಳೂರು ನಗರದಲ್ಲಿ ವಾಸವಿದ್ದರು. ಅದ್ದರಿಂದ ಮಠದಲ್ಲಿನ ಆಗುಹೋಗು ಗಮನಕ್ಕೆ ಬಂದಿಲ್ಲ.

ಚಾತುರ್ಮಾಸ್ಯ ನಿಮಿತ್ತ ಜು. 20ರಂದು ಶ್ರೀಗಳು ಮಠಕ್ಕೆ ಬಂದು ವಾಸ್ತವ್ಯ ಹೂಡಿದ್ದು, ಆಗ ಕಪಾಟುಗಳನ್ನು ತೆರೆದು ನೋಡಿದಾಗ ಪಾದುಕೆಗಳು ಹಾಗೂ ಬೆಳ್ಳಿಯ ಶ್ರೀ ಮುದ್ರೆಗಳು ಕಾಣೆ ಆಗಿರುವುದು ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next