Advertisement

ಸಂಗೀತ ಕಲಿಯಲು ಬಂದಿದ್ದ ಯುವಕ ನೇಣಿಗೆ ಶರಣು

10:30 AM Dec 22, 2017 | |

ಬೆಂಗಳೂರು: ಸಂಗೀತ ಕಲಿಯಲೆಂದು ಮುಂಬೈ ನಿಂದ ನಗರಕ್ಕೆ ಬಂದಿದ್ದ ಯುವಕ ನೇಣಿಗೆ ಶರಣಾಗಿರುವ ಘಟನೆ ವಿಲ್ಸನ್‌ ಗಾರ್ಡ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ.

Advertisement

ಶಾಂತಿನಗರದ ಚೌಡಪ್ಪ ರಸ್ತೆಯ ಚರ್ಚ್‌ ಬಳಿ ಮಹೇಶ್‌ ಎಂಬುವರ ಕಟ್ಟಡದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದ ಅಂಕಿತ್‌ ದುಬೆ(22) ಬುಧವಾರ ಮಧ್ಯಾಹ್ನ ಕೊಠಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವಿಲ್ಸನ್‌ ಗಾರ್ಡ್‌ನ್‌ ಪೊಲೀಸರು ತಿಳಿಸಿದ್ದಾರೆ.

ದುಬೆ ಒಂದೂವರೆ ತಿಂಗಳ ಬೆಂಗಳೂರಿಗೆ ಬಂದು ನೆಲೆಸಿದ್ದ. ಬುಧವಾರ ಬೆಳಗ್ಗೆಯಿಂದ ದುಬೆ ಸಹೋದರ ಮತ್ತು ಪೋಷಕರು ಕರೆ ಮಾಡಿದ್ದರೂ ಅಂಕಿತ್‌ ಪ್ರತಿಕ್ರಿಯಿಸಿರಲಿಲ್ಲ. ಅನುಮಾನಗೊಂಡ ಪೋಷಕರು ಮನೆ ಮಾಲೀಕರಿಗೆ ವಿಚಾರಿಸುವಂತೆ ಹೇಳಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
 

Advertisement

Udayavani is now on Telegram. Click here to join our channel and stay updated with the latest news.

Next