Advertisement
ರಾಜ್ಯ ಚುನಾವಣೆಯ ಹೊಸ್ತಿಲಲ್ಲೇ ಬಸವಣ್ಣನ ಹೆಸರಲ್ಲಿ ಧರ್ಮಯುದಟಛಿವೇ ನಡೆದು ಹೋಯ್ತು.ಇದೀಗ ಚುನಾವಣೆಯೂ ಅದೇ ಧರ್ಮ ಜಿಜ್ಞಾಸೆಯ ನೆರಳಲ್ಲೇ ನಡೆಯುತ್ತಿದೆ.
ಬಸವಣ್ಣನ ಕಾಯಕವೇ ಕೈಲಾಸ ಎಂಬ ಮಾತನ್ನು ಉಪಯೋಗಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ,
ತಮ್ಮ ಸರ್ಕಾರದ ಸಾಧನೆಯನ್ನು ಇಂಗ್ಲಿಷ್ನಲ್ಲಿ 5 ಟ್ವೀಟ್ಗಳಲ್ಲಿ ಸುದೀರ್ಘವಾಗಿ ವಿವರಿಸಿದ್ದಾರೆ. ನನಗೆ ವಿಶ್ವಮಾನವರಾಗಿ ಬಸವಣ್ಣ ಕಂಡಿದ್ದಾರೆ. ಎಲ್ಲರನ್ನೂ ಸಮಾನವಾಗಿ ಕಂಡು ಅವರ ಹಾದಿಯಲ್ಲಿ ನಡೆಯೋಣ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅಮಿತ್ ಶಾ ಬೆಂಗಳೂರು ಪ್ರವಾಸ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಸರ್ಕಾರ ಬಂದ ಮೇಲಿಂದ ಕರ್ನಾಟಕದಲ್ಲಿ ಅಭಿವೃದಿಟಛಿ ಮತ್ತು ಉತ್ತಮ ಆಡಳಿತ ದೂರವಾಗಿದೆ ಎಂದು ಯಡಿಯೂರಪ್ಪ ಟ್ವೀಟಿಸಿದ್ದರು. ಇದಕ್ಕೆ ಸಿದ್ದರಾಮಯ್ಯ ಪ್ರತಿ ಟ್ವೀಟ್ ಮಾಡಿ, ಕನಿಷ್ಠಪಕ್ಷ ಬಸವ ಜಯಂತಿಯಂದಾದರೂ ಹುಸಿಯ ನುಡಿಯಲು ಬೇಡ ಎಂದು ಕಾಲೆಳೆದರು.
ಕಾಂಗ್ರೆಸ್ ಸರ್ಕಾರದ ಪ್ರತ್ಯೇಕ ಧರ್ಮ ಸ್ಥಾಪನೆಯ ನಿಲುವನ್ನು ಟೀಕಿಸಿ ಬಿಜೆಪಿ ಸರಣಿ ಕಾಟೂìನ್ಗಳನ್ನು ಹರಿಬಿಟ್ಟಿದೆ. ಅಮಿತ್ ಶಾ ಹಾಕಿದ ಹಾರ ಬಸವೇಶ್ವರರ ಪ್ರತಿಮೆಯಿಂದ ಜಾರಿ ಕೆಳಕ್ಕೆ ಬಿದ್ದುದನ್ನೇ ಗುರಿಯಾಗಿಸಿ ಕಾಂಗ್ರೆಸ್, ಗುರು ಬಸವಣ್ಣ ಅವರು ಅಮಿತ್ ಶಾರನ್ನು ತಿರಸ್ಕರಿಸಿದ್ದಾರೆ ಎಂದು ಟ್ವೀಟ್ ಮಾಡಿದೆ. ಮತದಾನ- ಬಸವ ತತ್ವ
ಇದೆಲ್ಲದರ ಮಧ್ಯೆ,ಬಸವ ಜಯಂತಿಯಂದು ರಾಜ್ಯದ ಹಿತದೃಷ್ಟಿಯಿಂದ ನಾವು ಮತದಾನ ಮಾಡುತ್ತೇವೆ ಎಂಬ ನಿರ್ಣಯ ಮಾಡೋಣ, ಉತ್ತಮ ಸರ್ಕಾರವನ್ನು ಆಯ್ಕೆ ಮಾಡುವ ಮೂಲಕ ಬಸವಣ್ಣನವರ ಸಾಮಾಜಿಕ ನ್ಯಾಯದ ಚಿಂತನೆಯನ್ನು ವಾಸ್ತವವಾಗಿ ಸೋಣ ಎಂಬುದಾಗಿ ಬೆಂಗಳೂರಿನ ಮತದಾನ ಜಾಗೃತಿ ವೇದಿಕೆ ವೋಟ್ಮಾಡಿ2018 ಮಾಡಿರುವ ಮತಜಾಗೃತಿ ಟ್ವೀಟ್ ಗಮನ ಸೆಳೆದಿದೆ.