Advertisement
ಜಲಮಂಡಳಿ ಅಭಿಯಂತರರ ಸಂಘದಿಂದ ಕಾವೇರಿ ಭವನದಲ್ಲಿ ಗುರುವಾರ “ತಾಂತ್ರಿಕ ದಿನಚರಿ 2018′ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿರುವ ಬೆಂಗಳೂರಿಗೆ ನೀರು ಪೂರೈಸುವಂತಹ ಕಷ್ಟಕರ ಕೆಲಸವನ್ನು ಜಲಮಂಡಳಿ ಎಂಜಿನಿಯರ್ಗಳು ಮಾಡುತ್ತಿದ್ದಾರೆ.
Related Articles
Advertisement
ಒಂದೇ ಒಂದು ದಿನ ಪೊಲೀಸರು ಕಾರ್ಯನಿರ್ವಹಿಸಲಿಲ್ಲವೆಂದರೆ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯೇನು? ಹೀಗಾಗಿ ಅವರನ್ನು ಸದಾ ದೂರುವ ಬದಲಿಗೆ, ಅವರೊಂದಿಗೆ ಸೇರಿ ಕೆಲಸ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಜಾರ್ಜ್ ನುಡಿದರು.
ಎಂಜಿನಿಯರ್ಗಳ ಸಂಘದ ಕಾರ್ಯದರ್ಶಿ ಎಂ.ದೇವರಾಜು ಮಾತನಾಡಿ, ಜಲಮಂಡಳಿಯಲ್ಲಿ ಎಂಜಿನಿಯರ್ಗಳ ಹುದ್ದೆಗಳು ಖಾಲಿಯಿದ್ದು, ಭರ್ತಿ ಮಾಡಲು ಸರ್ಕಾರದ ಮಟ್ಟದಲ್ಲಿ ಕ್ರಮಕೈಗೊಳ್ಳಬೇಕು. ಜತೆಗೆ ಸಿಬ್ಬಂದಿಗಳಿಗೆ ಹಳೆ ಪಿಂಚಣಿಯನ್ನೇ ಮುಂದುವರಿಸಬೇಕು ಎಂದು ಮನವಿ ಮಾಡಿದರು.
ಅದಕ್ಕೆ ಸ್ಪಂದಿಸಿದ ಜಾರ್ಜ್ ಅವರು, ಸಿಬ್ಬಂದಿಗೆ ಹಳೆ ಪಿಂಚಣಿಯನ್ನು ನೀಡುವ ಕುರಿತಂತೆ ಕ್ರಮಕೈಗೊಳ್ಳುವಂತೆ ಜಲಮಂಡಳಿ ಅಧ್ಯಕ್ಷರಿಗೆ ಸೂಚಿಸಿದ್ದು, ಅವರು ಶಿಫಾರಸ್ಸು ಮಾಡಿದರೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಇಂಡಿಯನ್ ವರ್ಚುಯಲ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಷನ್ನಿಂದ ಜಲಮಂಡಳಿಯ ಪ್ರಧಾನ ಎಂಜಿನಿಯರ್ ಕೆಂಪರಾಮಯ್ಯ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. ಈ ವೇಳೆ ಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್, ನೌಕರರ ಸಂಘದ ಅಧ್ಯಕ್ಷ ರಾಜಣ್ಣ ಸೇರಿ ಪ್ರಮುಖರು ಹಾಜರಿದ್ದರು.
ರಸ್ತೆ ಅಗೆದರೆ ಜನರ ಹಣ ಪೋಲು: ಬಿಬಿಎಂಪಿಯಿಂದ ಒಂದು ಕಡೆಯಿಂದ ರಸ್ತೆಗಳಿಗೆ ಡಾಂಬರೀಕರಣ ಮಾಡಿದರೆ, ಮತ್ತೂಂದು ಕಡೆಯಿಂದ ಜಲಮಂಡಳಿಯವರು ರಸ್ತೆಯನ್ನು ಅಗೆಯುತ್ತಾರೆ. ಇದರಿಂದಾಗಿ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ. ನೀರು ಸೋರಿಕೆಯಾಗುತ್ತಿದ್ದರೆ ರಸ್ತೆ ಅಗೆಯುವುದು ತಪ್ಪಲ್ಲ.
ಆದರೆ, ಸೋರಿಕೆ ತಡೆಗಟ್ಟಿದ ನಂತರ ರಸ್ತೆಯನ್ನು ದುರಸ್ತಿ ಮಾಡುತ್ತಿಲ್ಲ. ಹೀಗಾಗಿ ನಗರದ ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗುತ್ತಿವೆ. ಈಗಾಗಲೇ ಸ್ಥಳೀಯ ಸಂಸ್ಥೆಗಳ ನಡುವೆ ಸಮನ್ವಯ ಸಮಿತಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಆಗಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.