Advertisement

ಕರ್ನಾಟಕದ ಯೋಧ ಆತ್ಮಹತ್ಯೆಗೆ ಶರಣು

11:42 PM May 18, 2019 | Team Udayavani |

ಪಾಟ್ನಾ: ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ನಿವಾಸದಲ್ಲಿ ಭದ್ರತೆಗೆಂದು ನಿಯೋಜಿತರಾಗಿದ್ದ ಕರ್ನಾಟಕ ಮೂಲದ ಸಿಆರ್‌ಪಿಎಫ್ ಯೋಧರೊಬ್ಬರು ಶುಕ್ರವಾರ ತಮ್ಮ ಸರ್ವಿಸ್‌ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಸಿಆರ್‌ಪಿಎಫ್ನ 122 ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮೃತ ಯೋಧ ಗಿರಿಯಪ್ಪ ಕಿರಸೂರ್‌(29) ಬಾಗಲಕೋಟೆ ಜಿಲ್ಲೆಯ ಗ್ರಾಮವೊಂದರ ನಿವಾಸಿ. ಇವರು ರಾಬ್ರಿ ಅವರ ಅತಿಭದ್ರತೆಯ ಸರ್ಕುಲರ್‌ ರಸ್ತೆಯ ಬಂಗಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಗುರುವಾರ ತಮ್ಮ ಪತ್ನಿ ಜೊತೆ ಫೋನ್‌ನಲ್ಲಿ ಏರುದನಿಯಲ್ಲಿ ಮಾತನಾಡಿದ್ದ ಅವರು ಬಳಿಕ ತೀವ್ರವಾಗಿ ನೊಂದಿದ್ದರು. ಶುಕ್ರವಾರ ಏಕಾಏಕಿ ಗುಂಡಿಕ್ಕಿಕೊಂಡರು ಎಂದು ಹೇಳಲಾಗಿದೆ. ಸ್ಥಳದಿಂದ ರೈಫ‌ಲ್‌ ವಶಪಡಿಸಿಕೊಳ್ಳಲಾಗಿದೆ. ಮೃತದೇಹವನ್ನು ಯೋಧರ ಸ್ವಗ್ರಾಮಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next