Advertisement

ವಿಲನ್‌ ಆದ ಹೀರೊಯಿನ್‌ ಶನಾಯ

07:16 PM Apr 23, 2021 | Team Udayavani |

ಹುಬ್ಬಳ್ಳಿ : ರುಂಡ-ಮುಂಡ ಬೇರ್ಪಡಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ. ಕೊಲೆಯಾದ ರಾಕೇಶ ಕಾಟವೆ ಸಹೋದರಿ ಹಾಗೂ ಚಿತ್ರ ನಟಿ ಶನಾಯ ಕಾಟವೆ ಪಾತ್ರ ಇರುವುದು ಬೆಳಕಿಗೆ ಬಂದಿದ್ದು, ಆರೋಪಿಯನ್ನು ತೀವ್ರ ವಿಚಾರಗೊಳಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

Advertisement

ಜೊತೆಗೆ ಇನ್ನೂ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಎಸ್ಪಿ ಪಿ.ಕೃಷ್ಣಕಾಂತ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ರಾಕೇಶ ಕೊಲೆ ಬಗ್ಗೆ ಸಹೋದರಿ ಶನಾಯಗೆ ತಿಳಿದಿತ್ತು. ಆದರೆ ಆರಂಭದಲ್ಲಿ ಈ ಕುರಿತು ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿಕೊಂಡಿದ್ದಳು. ಆದರೆ ಕೆಲವು ಸಾಕ್ಷಿಗಳನ್ನು ಸಂಗ್ರಹಿಸಿದಾಗ ಇದರಲ್ಲಿ ಅವಳ ಪಾತ್ರ ಇರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ತಿಳಿಸಿದರು.

ಮೂವರ ಬಂಧನ: ಪ್ರಕರಣದ ಆಳಕ್ಕೆ ಇಳಿದಿರುವ ಗ್ರಾಮೀಣ ಪೊಲೀಸರು ಇನ್ನೂ ಮೂವರ ಪಾತ್ರ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಮೊದಲ ಆರೋಪಿ ಹಾಗೂ ನಟಿ ಶನಾಯ ಕಾಟವೆ ಅವಳ ಪ್ರಿಯತಮ ನಿಜಾಯ್‌ನ ಸೋದರ ಮಲ್ಲಿಕ್‌ (18), ಫಿರೋಜ್‌ (18) ಹಾಗೂ ನಿಜಾಜ್‌ನ ತಂದೆ ಸೈಫುಲ್ಲಾ (55) ಅವರನ್ನು ಬಂಧಿಸಿ ತೀವ್ರ ವಿಚಾರಣೆಗೊಳಡಿಸಿದ್ದಾರೆ. ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಎಂಟು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ. ಪ್ರಕರಣದಲ್ಲಿ ಶನಾಯಳ ಪಾತ್ರದ ಬಗ್ಗೆ ಇನ್ನಷ್ಟು ವಿಷಯಗಳನ್ನು ಕಲೆ ಹಾಕಲಾಗುತ್ತಿದೆ ಎಂದರು.

ಕೊಲೆ ಬೆನ್ನು ಹತ್ತಿದ ಪೊಲೀಸರು ಶನಾಯಳನ್ನು ವಿಚಾರಣೆಗೊಳಪಡಿಸಿದಾಗ ತನ್ನ ಕಾರಿನಲ್ಲಿ ಸಹೋದರನ ಶವ ಇರುವುದು ಗೊತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಳು. ಏ.13ರಂದು ನಿಮ್ಮಣ್ಣನ ಕೊಲೆಯಾಗಿದೆ ಎಂದು ಯಾರೋ ಹೇಳಿದ ನಂತರವಷ್ಟೇ ಗೊತ್ತಾಗಿದೆ ಎಂದಿದ್ದಳು. ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ ನಂತರವಷ್ಟೇ ತನ್ನಪಾತ್ರ ಇರುವುದನ್ನು ಒಪ್ಪಿಕೊಂಡಿದ್ದಾಳೆ. ಪ್ರಾಥಮಿಕ ತನಿಖೆಯಲ್ಲಿ ಕೊಲೆಯಾಗಿರುವ ರಾಕೇಶ ಕಾಟವೆ ತನ್ನ ಸಹೋದರಿ ಶನಾಯ ಹಾಗೂ ನಿಯಾಜ್‌ ನಡುವಿನ ಪ್ರೇಮಕ್ಕೆ ಅಡ್ಡಿಯಾಗಿದ್ದ ಎನ್ನುವುದು ಗೊತ್ತಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next