Advertisement

ವೃದ್ಧೆಯ ಕತ್ತು ಸೀಳಿ ಕೊಲೆ

12:11 PM Aug 12, 2018 | |

ಬೆಂಗಳೂರು: ಮೈಸೂರು ರಸ್ತೆಯಲ್ಲಿನ ದುಬಾಸಿಪಾಳ್ಯದ ಬಳಿಯ ತೋಟದ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ವೃದ್ಧೆಯನ್ನು ದುಷðರ್ಮಿಗಳು ಕತ್ತು ಕೊಯ್ದು ಕೊಲೆಗೈದಿದ್ದಾರೆ. ಗೌರಮ್ಮ (65) ಕೊಲೆಯಾದ ವೃದ್ಧೆ.

Advertisement

ಚಿಕ್ಕಪೇಟೆಯ ದೇವರಾಜ್‌ ಎಂಬುವರಿಗೆ ಸೇರಿದ ತೋಟದಲ್ಲಿ ವಾಸವಿದ್ದ ಗೌರಮ್ಮ, ಜೀವನ ನಿರ್ವಹಣೆಗಾಗಿ ಹಸು ಸಾಕಣೆ ಮಾಡುತ್ತಿದ್ದರು. ತೋಟದ ಮಾಲೀಕ ದೇವರಾಜ್‌ ಮಾಸಿಕ ಮೂರು ಸಾವಿರ ರೂ. ಕೊಡುತ್ತಿದ್ದರು. ಅಲ್ಲದೆ, ಗೌರಮ್ಮರ ಪತಿಯ ಎರಡನೇ ಪತ್ನಿಯ ಮಕ್ಕಳು ಬನಶಂಕರಿಯಲ್ಲಿ ವಾಸವಿದ್ದು, ಆಗಾಗ ಬಂದು ಆಹಾರ ಪದಾರ್ಥ, ಹಣ್ಣು ಕೊಟ್ಟು ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಹಸು ನಿರಂತರವಾಗಿ ಕೂಗಿಕೊಳ್ಳುತ್ತಿತ್ತು. ಆದರೂ ಗೌರಮ್ಮ ಮನೆಯಿಂದ ಹೊರಬಂದಿಲ್ಲ. ಇದರಿಂದ ಅನುಮಾನಗೊಂಡ ಪಕ್ಕದ ಕಟ್ಟಡದ ಭದ್ರತಾ ಸಿಬ್ಬಂದಿ, ಗೌರಮ್ಮ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬನಶಂಕರಿಯಲ್ಲಿರುವ ಸಂಬಂಧಿಕರು ಬಂದು ಕಿಟಕಿ ಮೂಲಕ ಪರಿಶೀಲಿಸಿದಾಗ ಗೌರಮ್ಮ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.

ತಕ್ಷಣ ಕೆಂಗೇರಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಜ್ಜಿಯನ್ನು ಕೊಂದ ದುಷ್ಕರ್ಮಿಗಳು ಬಳಿಕ ಮನೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ. ಗೌರಮ್ಮ ಮೈ ಮೇಲೆ ಇದ್ದ ಯಾವುದೇ ಆಭರಣ ಕಳುವಾಗಿಲ್ಲ. ಹೀಗಾಗಿ ಪರಿಚಿತರೇ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next