Advertisement

ತೀರ್ಪಿಗೆ ತಡೆಯಾಜ್ಞೆ ಇಲ್ಲ ಎಂದ ಸುಪ್ರೀಂ ಕೋರ್ಟ್‌

06:54 AM Nov 15, 2018 | Team Udayavani |

ತಿರುವನಂತಪುರ/ಹೊಸದಿಲ್ಲಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರು ಪ್ರವೇಶಿಸುವ ಬಗ್ಗೆ ಸೆ.28ರಂದು ನೀಡಿದ ತೀರ್ಪಿಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋಕೋರ್ಟ್‌ ಬುಧವಾರ ಮತ್ತೂಮ್ಮೆ ನಿರಾಕರಿಸಿದೆ. ಇದರ ಜತೆಗೆ ಈ ಬಗ್ಗೆ ಶೀಘ್ರ ವಿಚಾರಣೆ ನಡೆಸಬೇಕು ಎಂಬ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರನ್ನೊಳಗೊಂಡ ನ್ಯಾಯಪೀಠ ತಳ್ಳಿ ಹಾಕಿದೆ.ಇದೇ ವೇಳೆ “ಟೈಮ್ಸ್‌ ನೌ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ತೀರ್ಪನ್ನು ಆತುರವಾಗಿ ಜಾರಿಗೊಳಿ ಸುವ ಇರಾದೆಯನ್ನು ಪ್ರಶ್ನಿಸಿದ್ದಾರೆ. ಇದರ ಜತೆಗೆ ಸುಗ್ರೀವಾಜ್ಞೆ ಜಾರಿಗೆ ತರುವ ಅಗತ್ಯವಿಲ್ಲ ಎಂದೂ ಹೇಳಿದ್ದಾರೆ. ತ್ರಿವಳಿ ತಲಾಖ್‌ ಮತ್ತು ಅಯ್ಯಪ್ಪ ದೇಗುಲಕ್ಕೆ ಹೊಂದಾಣಿಕೆಯೇ ಸರಿಯಲ್ಲ ಎಂದಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್‌ ಗುರುವಾರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next