Advertisement

ಕಾವೇರಿ ಕೂಗು ಯಶಸ್ಸು ದೇಶಕ್ಕೆ ಹರಡಬೇಕು: ನಟಿ ಜೂಹಿ ಚಾವ್ಲಾ

12:09 AM Feb 03, 2022 | Team Udayavani |

ಚೆನ್ನೈ: ಸದ್ಗುರು ಜಗ್ಗಿ ವಾಸುದೇವ್‌ ಅವರು ನಡೆಸುತ್ತಿರುವ ಕಾವೇರಿ ಕೂಗು ಅಭಿಯಾನದ ಯಶಸ್ಸು ಭಾರತದಾ ದ್ಯಂತ ಹರಡಬೇಕು ಎಂದು ಬಾಲಿವುಡ್‌ ನಟಿ ಜೂಹಿ ಚಾವ್ಲಾ ಹೇಳಿದ್ದಾರೆ.

Advertisement

ಇತ್ತೀಚೆಗೆ ತಮಿಳುನಾಡಿನ ಈರೋಡ್‌ ಜಿಲ್ಲೆಯ ಮೇವಾಣಿ ಗ್ರಾಮದಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ಈ ಮಾತನ್ನು ಹೇಳಿದ್ದಾರೆ.

“ಅಭಿಯಾನ ದಿಂದಾಗಿ ರೈತರ ಬದುಕಿನಲ್ಲಿ ಉಂಟಾಗಿ ರುವ ಬದಲಾವಣೆಯನ್ನು ಕಂಡು ನನಗೆ ಸದ್ಗುರು ಬಗ್ಗೆ ಇದ್ದ ಗೌರವ ಇನ್ನಷ್ಟು ಹೆಚ್ಚಿದೆ. ಅವರ ಅಭಿಯಾನಕ್ಕೆ ಅಳಿಲು ಸೇವೆಯಂತೆ ನಾನು ನನ್ನ ಮಿತ್ರರ ಜನ್ಮದಿನಕ್ಕೆ ಅವರಿಗೆ ಸಸಿಗಳನ್ನು ಕೊಡುಗೆ ಕೊಟ್ಟಿದ್ದೇನೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೇನೆ’ ಎಂದರು. ಊರಿನಲ್ಲಿ ಕಾವೇರಿ ಕೂಗು ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮರ ಆಧಾರಿತ ಕೃಷಿ ಪದ್ಧತಿ ನಡೆಸುತ್ತಿರುವ ರೈತರ ಮಾತು ಗಳನ್ನೂ ಅವರು ಕೇಳಿಸಿಕೊಂಡರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next