Advertisement

ಕಾಪು ತಾಲೂಕು ರಚನೆ ಚರಿತ್ರಾರ್ಹ: ಡಾ|ದೇವಿಪ್ರಸಾದ್‌ ಶೆಟ್ಟಿ

11:36 AM Mar 17, 2017 | Team Udayavani |

ಕಾಪು: ತಾಲೂಕು ಕೇಂದ್ರವಾಗಿ ಕಾಪುವನ್ನು ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವುದು ಚರಿತ್ರಾರ್ಹ ನಿರ್ಧಾರ. ಕಾಪು ಹಿಂದಿನಿಂದಲೂ ತನ್ನ ಐತಿಹಾಸಿಕತೆಯಿಂದಲೂ ಅನಿವಾಸಿ ಭಾರತೀಯರಿಂದಾಗಿಯೂ ಪ್ರಸಿದ್ಧಿ ಹೊಂದಿದೆ ಹಾಗೂ ವಿಧಾನಸಭಾ ಕ್ಷೇತ್ರವಾಗಿ ಕೇಂದ್ರಸ್ಥಾನದಲ್ಲಿ ಗುರುತಿಸಲ್ಪಟ್ಟಿತ್ತು. ಕಾಪು ಶಾಸಕ ವಿನಯಕುಮಾರ್‌ ಸೊರಕೆ ಶ್ರಮದಿಂದ ಇದೀಗ ಕಾಪು ತಾಲೂಕು ರಚನೆ ಸಾಧ್ಯವಾಗಿದೆ ಎಂದು ಪಂಚಾಯತ್‌ ಸದಸ್ಯರ ರಾಜ್ಯ ಒಕ್ಕೂಟದ ಉಪಾಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಹೇಳಿದ್ದಾರೆ.

Advertisement

ತಾಲೂಕು ರಚನೆಗಾಗಿ ಕಾಪು ಶಾಸಕ ವಿನಯಕುಮಾರ್‌ ಸೊರಕೆ ನೇತೃತ್ವದಲ್ಲಿ ಹೋರಾಟ ಸಮಿತಿ ರಚನೆಯಾದಾಗ ಬೆಂಬಲಿಸಿದ್ದ ವಿಪಕ್ಷದಮಂದಿ ಮುಂದೆ ಹೋರಾಟ ತೀವ್ರಗೊಂಡಾಗ ರಾಜಕೀಯ ಕಾರಣಗಳಿಂದ ದೂರ ಉಳಿದಿದ್ದರು. ಇದೀಗ ಕಾಪು ತಾಲೂಕು ಘೋಷಣೆಯಾಗಿರುವುದು ವಿರೋಧ ಪಕ್ಷದವರ ಬಾಯಿ ಮುಚ್ಚಿಸಿದೆ ಎಂದು ಡಾ| ಶೆಟ್ಟಿ ಹೇಳಿದರು.

ತಾಲೂಕು ರಚನೆಯಿಂದ 19 ಗ್ರಾ.ಪಂ.ವ್ಯಾಪ್ತಿ 1.36 ಲಕ್ಷ ಜನರು ಕಾಪು ತಾಲೂಕುವ್ಯಾಪ್ತಿಗೆ ಬರುತ್ತಿದ್ದು, ಆಡಳಿತ ವಿಕೇಂದ್ರೀ ಕರಣವಾಗಿ ಜನತೆಗೆ ಕೈಗೆಟುಕುವಷ್ಟರಲ್ಲಿ ಸರಕಾರಿಸೌಲಭ್ಯಗಳು ನಿಲುಕಲಿವೆ. 33 ಸರಕಾರಿ ಅಧೀನ ಕಚೇರಿಗಳು, ತಾಲೂಕು ಆರೋಗ್ಯಕೇಂದ್ರ, ಸಬ್‌ ರಿಜಿಸ್ಟ್ರಾರ್‌ ಕಚೇರಿ, ನ್ಯಾಯ ಸಂಕೀರ್ಣವೂ ಕಾಪುವಿಗೆ ಆಗಮಿಸಲಿದ್ದು, ಇದರಿಂದ ಸಹಾಯ ವಾಗಲಿದೆ ಎಂದು ಡಾ| ಶೆಟ್ಟಿ ಹೇಳಿದರು.
 
ಜನತೆಯ ಮೂಲ ಆಶಯದತೆ ಐತಿಹಾಸಿಕ ಕಾಪು ಪಟ್ಟಣ ಐಎಸ್‌ಪಿಆರ್‌ಎಲ್‌, ಯುಪಿಸಿ ಎಲ್‌, ಸುಜ್ಲಾನ್‌ನಂತಹ ಬೃಹತ್‌ ಕೈಗಾರಿಕೆಗಳಿಂದ, ಕಾಪು ದ್ವೀಪಸ್ತಂಭ, ಪಡುಬಿದ್ರಿ ಬೀಚ್‌ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಂದ ಪ್ರವಾಸೋದ್ಯಮ ನಿಟ್ಟಿನಲ್ಲಿಯೂ ಮಂಗಳೂರು ವಿ.ವಿ. ವಿಜ್ಞಾನ ಕೇಂದ್ರ ಸ್ಥಾಪನೆ, ಐಟಿಐ ಸ್ಥಾಪನೆಯಿಂದ ಶೈಕ್ಷಣಿಕ ಕೇಂದ್ರವಾಗಿಯೂ ಮಾರ್ಪಟಾಗಿದ್ದು, ಈಗಾಗಲೇ ಕೇಂದ್ರ ಸ್ಥಾನವಾಗಿ ಗುರುತಿಸಲ್ಪಟ್ಟಿದೆ. ತಾನು ಶಾಸಕನಾಗಿ ಆಯ್ಕೆಯಾದ ಬಳಿಕದ ಪ್ರಥಮ ಸಭೆಯಲ್ಲೇ ಕಾಪುವನ್ನು ಪುರಸಭೆ, ಕಾಪು ತಾಲೂಕು ಕೇಂದ್ರವನ್ನಾಗಿಸುವ ಪಣತೊಟ್ಟ ಸೊರಕೆ ಅವರು ನುಡಿದಂತೆ ನಡೆದು ತೋರಿಸಿದ ಧೀಮಂತ ರಾಜಕಾರಣಿ ಎಂದೂ ಡಾ| ದೇವಿಪ್ರಸಾದ್‌ ಶೆಟ್ಟಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next