Advertisement

ಪೇಜಾವರ ಶ್ರೀ ಹುಟ್ಟೂರಿನ ಕತೆ

07:55 PM Jan 03, 2020 | Lakshmi GovindaRaj |

ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಮೀಪವಿರುವ, ಕುಮಾರಧಾರ ಮತ್ತು ನೇತ್ರಾವತಿ ನದಿಯ ನಡುವೆ ಇರುವ ಸುಂದರ ತಾಣ, ರಾಮಕುಂಜ. ಪರಂಪರಾಗತ ನಂಬಿಕೆಗಳಂತೆ ಈ ಸ್ಥಳದ ಪ್ರಾಚೀನತೆ ತ್ರೇತಾಯುಗದವರೆಗೆ ಚಾಚಿದೆ. ಶ್ರೀರಾಮನು ವನವಾಸಿಯಾಗಿದ್ದಾಗ, ಇಲ್ಲಿ ಕೆಲಕಾಲ ನೆಲೆಸಿ, ಶಿವನನ್ನು ಪೂಜಿಸಿದನಂತೆ.

Advertisement

ಅದರಿಂದಾಗಿಯೇ ಇಲ್ಲಿಗೆ “ರಾಮಕುಂಜ’ ಎನ್ನುವ ಹೆಸರು ಬಂತು. ಇದಕ್ಕೆ ಪೂರಕವಾಗಿ ಇಲ್ಲಿರುವ ಶ್ರೀ ರಾಮಕುಂಜೇಶ್ವರ ದೇಗುಲವೂ ಊರ ಹೆಸರಿಗೆ ಅನ್ವರ್ಥವಾಗಿದೆ. ಪಾಂಡವರು, ಶ್ರೀ ಮನ್ಮಧ್ವಾಚಾರ್ಯರು ಮುಂತಾದ ಪ್ರಸಿದ್ಧ ಪುಣ್ಯ ಪುರುಷರ ಪಾದಸ್ಪರ್ಶದಿಂದ ಪುನೀತವಾಗಿರುವ ಈ ಊರು, ಪೇಜಾವರ ಶ್ರೀ ವಿಶ್ವೇಶ ತೀರ್ಥರ ಹುಟ್ಟೂರೂ ಹೌದು.

* ನಾಗರಾಜ್‌ ಎನ್‌.ಕೆ., ಕಡಬ

Advertisement

Udayavani is now on Telegram. Click here to join our channel and stay updated with the latest news.

Next