Advertisement

ಗೋವಾದಲ್ಲಿ ಮಹದಾಯಿ ಕುರಿತ ಹಾಡು ವೈರಲ್‌

11:21 PM Jan 15, 2020 | Lakshmi GovindaRaj |

ಪಣಜಿ: ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ಬಿಡಬಾರದು ಎಂದು ಗೋವಾದಲ್ಲಿ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಸತತ ಹೋರಾಟ ನಡೆಸುತ್ತಲಿವೆ. ಇದೀಗ ಕಬೀರ್‌ ನಾಯ್ಕ ಎಂಬ ಯುವಕ ಮಹದಾಯಿ ನದಿ ಬಗ್ಗೆ ಗೋವಾ ಜನರಲ್ಲಿ ಜಾಗೃತಿ ಮೂಡಿಸಲು ಮಾಡಿರುವ “ಅಮಚಿ ಮಹದಾಯಿ, ಅಮಕಾ ಜಾಯ್‌’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಯುಟ್ಯೂಬ್‌ ಮತ್ತು ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ಹರಿದಾಡುತ್ತಿದೆ.

Advertisement

ಹಾಡನ್ನು ಮಹದಾಯಿ ಜಲಾನಯನ ಪ್ರದೇಶದಲ್ಲಿ ಚಿತ್ರಿಸಿದ್ದು, ಪಣಜಿ ಸ್ಟುಡಿಯೋದಲ್ಲಿ ಆಡಿಯೊ ರೆಕಾರ್ಡ್‌ ಮಾಡಲಾಗಿದೆ. ಮಹದಾಯಿ ನದಿ ನೀರು ಉಳಿವಿಗಾಗಿ ರಾಜ್ಯದ ಯುವ ವರ್ಗದ ಗಮನ ಸೆಳೆಯಲು ಈ ಹಾಡನ್ನು ಚಿತ್ರೀಕರಿ ಸಲಾಗಿದೆ. ರಾಪ್‌ ಸಾಂಗ್‌ನ್ನು ಯುವವರ್ಗ ಇಷ್ಟಪಡುತ್ತದೆ, ಇದರಿಂದಾಗಿ ನಮ್ಮ ಮಹದಾಯಿ ಸಂದೇಶ ಈ ಮೂಲಕ ಯುವವರ್ಗಕ್ಕೆ ತಲು ಪುತ್ತದೆ ಎಂದು ಕಬೀರ್‌ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next