Advertisement

ಗ್ರಾಮಸ್ಥರಿಂದ ಆತ್ಯಾಚಾರಿ ಮನೆಗೆ ಮುತ್ತಿಗೆ

06:24 AM May 26, 2020 | Lakshmi GovindaRaj |

ಎಚ್‌.ಡಿ.ಕೋಟೆ: ವಿವಾಹಿತನೊಬ್ಬ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದು, ಗ್ರಾಪಂನಲ್ಲಿ ಸಮಸ್ಯೆ ಪರಿಹರಿಸಿಕೊಳ್ಳುವ ಭರವಸೆ ನೀಡಿ, ತಲೆ ಮರೆಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅತ್ಯಾಚಾರಿ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಟೈಗರ್‌ಬ್ಲಾಕ್‌ನಲ್ಲಿ ನಡೆದಿದೆ.

Advertisement

ತಾಲೂಕಿನ ಟೈಗರ್‌ಬ್ಲಾಕ್‌ನ ನಿವಾಸಿ ಸಂತ್ರ ಅದೇ ಗ್ರಾಮದ ಒಂದೇ ಸಮುದಾಯದ ಗೃಹಿಣಿ ಮೇಲೆ ಬಲತ್ಕಾರವಾಗಿ ಅತ್ಯಾಚಾರ ನಡೆಸಿದ್ದಾನೆ. ಘಟನೆಗೆ  ಸಂಬಂಧಿಸಿದಂತೆ ಆರೋಪಿ ಸಂತ್ರ ತಲೆ ಮರೆಸಿಕೊಂಡಿದ್ದಾರೆ. ಗೃಹಿಣಿ ಪತಿ ಜೀವನೋಪಾಯಕ್ಕಾಗಿ ಹೊರ ಊರಿಗೆ ಉದ್ಯೋಗ ಅರಿಸಿ ಹೋಗಿದ್ದು, ಹಿಂದಿರುಗಿ ಮನೆಗೆ ಬಂದಿರಲಿಲ್ಲ.

ಇನ್ನು ಇದ್ದ ಇಬ್ಬರು ಮಕ್ಕಳು ಅದೇ ಗ್ರಾಮದ  ಸಂಬಂಧಿಕರ ಮನೆಗೆ ತೆರಳಿದ್ದರು. ಆಗ ರಾತ್ರಿ ವೇಳೆ ಗೃಹಿಣಿ ಮನೆಗೆ ಬಂದ ಸಂತ್ರ ಆಕೆಯೊಡನೆ  ಅನುಚಿತವಾಗಿ ವರ್ತಿಸಿದಾಗ ಇದನ್ನು ಪ್ರಶ್ನಿಸುತ್ತಿದ್ದಂತೆಯೇ ನನಗೆ ಗಂಡ, ಮಕ್ಕಳಿದ್ದಾರೆ ಬೇಡ ಎಂದು ಪರಿಪರಿ ಯಾಗಿ ಬೇಡಿ ಕೊಂಡರೂ  ಬಿಡದ ಸಂತ್ರ ಆಕೆ ಮೇಲೆ ಬಲವಂತವಾಗಿ ಅತ್ಯಾಚಾರ ನಡೆಸಿ ದ ಎಂದು ಗೃಹಿಣಿ ಆರೋಪಿಸಿದ್ದಾರೆ.

ಘಟನೆ ಕುರಿತು ಎಚ್‌.ಡಿ.ಕೋಟೆ  ಠಾಣೆಗೆ ದೂರು ನೀಡಲು ಹೋದಾಗ ಗ್ರಾಪಂನಲ್ಲೇ ಪರಿಹರಿಸಿಕೊಳ್ಳಿ ಎಂದು ಪೊಲೀಸರು  ಹೇಳಿದಾಗ, ಮರಳಿ ಗ್ರಾಮಕ್ಕೆ ಹಿಂದಿರುಗಿ ಪಂಚಾಯ್ತಿ ಸೇರುತ್ತಿದ್ದಂತೆಯೇ ಸಂತ್ರ ಮನೆಯಿಂದ ಪರಾರಿಯಾಗಿದ್ದಾರೆ. ಇದರಿಂದ ಗ್ರಾಮದ ನೂರಾರು ಮಹಿಳೆಯರು ಒಗ್ಗೂಡಿ ಸಂತ್ರ ಮನೆಯ ಮುಂದೆ ಜಮಾಯಿಸಿ, ಪ್ರತಿಭಟನೆ ನಡೆಸಿದರು.  ಸ್ಥಳಕ್ಕಾಗಮಿಸಿದ ಸಬ್‌ಇನ್ಸ್‌ಪೆಕ್ಟರ್‌ ಎಂ.ನಾಯಕ್‌ ಆರೋಪಿ ವಿರುದ ದೂರು ದಾಖಲಿಸುವ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next