Advertisement

ನೀರು ಕುಡಿಯಲು ಹೋದ ಕುರಿಗಾಹಿ ಮೊಸಳೆಗಳಿಗೆ ಬಲಿ

10:45 PM Apr 28, 2019 | Team Udayavani |

ಸೈದಾಪುರ: ಯಾದಗಿರಿ ಜಿಲ್ಲೆ ಸೈದಾಪುರ ಸಮೀಪದ ಗುಡೂರು ಭೀಮಾ ನದಿ ದಡದಲ್ಲಿ ಭಾನುವಾರ ಮಧ್ಯಾಹ್ನ ನೀರು ಕುಡಿಯಲು ಹೋಗಿದ್ದ ಕುರಿಗಾಹಿಯೊಬ್ಬ ಎರಡು ಮೊಸಳೆಗಳಿಗೆ ಆಹಾರವಾಗಿದ್ದಾನೆ. ಗುಡೂರಿ ಬಸವಲಿಂಗಪ್ಪ (55) ಮೃತ ವ್ಯಕ್ತಿ.

Advertisement

ಬಸವಲಿಂಗಪ್ಪ ದಿನ ನಿತ್ಯದಂತೆ ತನ್ನ ಕುರಿಗಳನ್ನು ಮೇಯಿಸಲು ನದಿ ತೀರದ ಪ್ರದೇಶಕ್ಕೆ ಹೋಗಿದ್ದ. ಮಧ್ಯಾಹ್ನದ ವೇಳೆಗೆ ಕುರಿಗಳಿಗೆ ನೀರು ಕುಡಿಸಲು ಹೋಗಿದ್ದ. ಕುರಿಗಳಿಗೆ ನೀರುಣಿಸಿ ನಂತರ ನದಿ ದಂಡೆಯಲ್ಲಿ ಕುಳಿತು ಊಟ ಮಾಡಿ ನೀರು ಕುಡಿಯಲು ನದಿಗೆ ಇಳಿದ ವೇಳೆ ಎರಡು ಮೊಸಳೆಗಳು ಏಕಾಏಕಿ ದಾಳಿ ಮಾಡಿ ಆತನನ್ನು ಏಳೆದೊಯ್ದಿವೆ.

ಮೊಸಳೆ ಜತೆ ಸತತ 10-15 ನಿಮಿಷ ಕಾದಾಡಿ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ. ಇದನ್ನು ನೋಡಿದ ಆತನ ಸಹಚರ ವೃದ್ಧನಾದ ಪರಿಣಾಮ ಸಹಾಯ ಮಾಡಲು ಸಾಧ್ಯವಾಗಿಲ್ಲ. ಆತ ಗ್ರಾಮಕ್ಕೆ ತೆರಳಿ ಮಾಹಿತಿ ನೀಡಿದ.

ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಮತ್ತು ಸ್ಥಳೀಯ ಮೀನುಗಾರರು ಮೊಸಳೆಗಳಿಂದ ಬಸವಲಿಂಗಪ್ಪನನ್ನು ಉಳಿಸಿಕೊಳ್ಳಲು ಯತ್ನಿಸಿದರು. ಅಷ್ಟರಲ್ಲಿಯೇ ಆತನ ಎಡಗೈ ಮತ್ತು ಬಲಗಾಲನ್ನು ಮೊಸಳೆಗಳು ತಿಂದಿದ್ದವು. ರಕ್ಷಣಾ ಕಾರ್ಯ ಪ್ರಯೋಜವಾಗದೆ ಆತ ಮೃತಪಟ್ಟಿದ್ದಾನೆ. ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next