Advertisement

ರಸ್ತೆ ಕಾಂಕ್ರೀಟ್‌ಗೊಂಡರೂ ವಾಹನ ಸಂಚಾರ ದುಸ್ತರ

01:29 AM Jun 18, 2020 | Sriram |

ಮುಂಡಾಜೆ: ಬೆಳ್ತಂಗಡಿ ತಾ| ನ ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಅರಣಿಪಾದೆಯಿಂದ ಅನಾರುವರೆಗೆ 1.5 ಕಿ. ಮೀ.ಉದ್ದದ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗಿದೆ. ಇತ್ತೀಚೆಗಷ್ಟೇ ಇದರ ಕಾಮಗಾರಿ ಪೂರ್ಣಗೊಂಡಿದ್ದು, ಈ ಪ್ರದೇಶದ ಜನರು ರಸ್ತೆ ಸಂಪರ್ಕದ ಬಗ್ಗೆ ಸಂತಸಗೊಂಡಿದ್ದರು. ಆದರೆ ಇಲ್ಲಿ ಎರಡು ಕಡೆ ಮೋರಿಗಳ ಕೆಲಸ ಆಗದ ಕಾರಣ ಈಗ ಸಂಚಾರ ದುಸ್ತರಗೊಂಡಿದೆ.

Advertisement

ಈಗಾಗಲೇ ಮಳೆ ಆರಂಭವಾಗಿದ್ದು, ಮೋರಿಗಳನ್ನು ಹಾಕಬೇಕಾದ ಸ್ಥಳಗಳಲ್ಲಿ ರಸ್ತೆ ಕೆಸರಿನಿಂದ ಆವೃತವಾಗಿದೆ. ನೀರು ನಿಲ್ಲುತ್ತಿದ್ದು, ವಾಹನಗಳು ಹೂತು ಹೋಗುತ್ತಿವೆ. ಇದರಿಂದ ಈ ಪ್ರದೇಶದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅನಾರು ಪ್ರದೇಶದ ಜನರಿಗೆ ಇದು ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಬದಲಿ ಇರುವ ಇನ್ನೊಂದು ರಸ್ತೆ ಕೂಡ ಸಂಪೂರ್ಣ ಹಾಳಾಗಿದೆ. ಮೋರಿಗಳ ನಿರ್ಮಾಣ ತತ್‌ಕ್ಷಣ ಆಗದಿದ್ದರೆ ಈ ವರ್ಷದ ಮಳೆಗಾಲದಲ್ಲಿ ಅನಾರು ಪ್ರದೇಶದ ಜನರಿಗೆ ತ್ರಿಶಂಕು ಸ್ಥಿತಿ ನಿರ್ಮಾಣವಾಗಲಿದೆ.

ಶೀಘ್ರ ಮೋರಿ ಆಳವಡಿಕೆ
ಅನಾರು ಪ್ರದೇಶದ ಜನರಿಗೆ ಮಳೆಗಾಲದಲ್ಲಿ ರಸ್ತೆ ಸಂಪರ್ಕಕ್ಕೆ ತೊಂದರೆಯಾಗದಂತೆ ಸದ್ಯವೇ ಮೋರಿ ಕಾಮಗಾರಿ ಆರಂಭಿಸಿ, ವ್ಯವಸ್ಥಿತ ರೀತಿಯಲ್ಲಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು.
-ಶೈಲಜಾ, ಅಧ್ಯಕ್ಷರು,
ಗ್ರಾ.ಪಂ. ಚಾರ್ಮಾಡಿ

Advertisement

Udayavani is now on Telegram. Click here to join our channel and stay updated with the latest news.

Next