Advertisement

ರಿಪಬ್ಲಿಕ್‌ ಆಫ್ ಗೋಕಾಕ ಆಗಲು ಬಿಡಲ್ಲ: ಹೆಬ್ಬಾಳ್ಕರ್‌

11:02 PM Dec 30, 2019 | Lakshmi GovindaRaj |

ಬೆಳಗಾವಿ: “ಬೆಳಗಾವಿ ತಾಲೂಕನ್ನು ಯಾವುದೇ ಕಾರಣಕ್ಕೂ ರಿಪಬ್ಲಿಕ್‌ ಆಫ್‌ ಗೋಕಾಕ್‌ ಮಾಡಲು ಬಿಡುವುದಿಲ್ಲ. ರಮೇಶ ಜಾರಕಿಹೊಳಿ ಕೀಳು ರಾಜಕಾರಣ, ಜನರ ಮಧ್ಯೆ ವಿಷಬೀಜ ಬಿತ್ತುವುದನ್ನು ಬಿಟ್ಟು ಅಭಿವೃದ್ಧಿ ಕಡೆಗೆ ಗಮನ ಕೊಡಲಿ’ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ಕುರಿತು ಪ್ರಕಟಣೆ ನೀಡಿ, ನನ್ನ ವಿರುದ್ಧ ನಿಲ್ಲುವವರಿಗೆ ರಮೇಶ್‌ 5 ಕೋಟಿ ರೂ. ಕೊಡುತ್ತೇನೆಂದು ಹೇಳಿದ್ದಾರೆ. ಬಿಜೆಪಿ ಸೇರಿದ ತಕ್ಷಣ 5 ಕೋಟಿ ರೂ. ಮತದಾ ರರಿಗೆ ಹಂಚಲು ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಚುನಾವಣೆ ಆಯೋಗ ಅನುಮತಿ ನೀಡಿದೆಯೇ?

ಒಂದು ಕಡೆ ಲಕ್ಷ್ಮೀ ಹೆಬ್ಬಾಳ್ಕರ್‌ ದುಡ್ಡು ಹಂಚಿ ಗೆದ್ದು ಬಂದಿದ್ದಾರೆ ಎನ್ನುವ ರಮೇಶ್‌, ಮತ್ತೂಂದು ಕಡೆ ತಾವು 5 ಕೋಟಿ ರೂ. ಹಂಚುವುದಾಗಿ ಹೇಳುವ ಮೂಲಕ ಗೊಂದಲ ಸೃಷ್ಟಿಸುತ್ತಿ ದ್ದಾರೆ. ರಮೇಶ್‌ ಹಂಚುವುದು ಬಿಜೆಪಿ ದುಡ್ಡಾ ಅಥವಾ ಅವರ ಸ್ವಂತದ್ದಾ? ಮತ ದಾ ರರಿಗೆ ಅಕೌಂಟ್‌ ಮೂಲಕ ಹಂಚು ತ್ತಾರಾ? ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next