Advertisement

ಶಿಂಧೆ ಬಣಕ್ಕೆ ನಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗಲಿಲ್ಲ: ಆದಿತ್ಯ ಠಾಕ್ರೆ

02:54 PM Jul 03, 2022 | Team Udayavani |

ಮುಂಬಯಿ : ಸದನಕ್ಕೆ ಬಂದ ಏಕನಾಥ್ ಶಿಂಧೆ ಬಣದ ಬಂಡಾಯ ಶಾಸಕರಿಗೆ ನಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗಲಿಲ್ಲ ಎಂದು ಮಾಜಿ ಸಚಿವ , ಯುವ ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಭಾನುವಾರ ಹೇಳಿಕೆ ನೀಡಿದ್ದಾರೆ.

Advertisement

ಮಹಾರಾಷ್ಟ್ರ ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ , ಶಾಸಕರು ಒಂದು ಹೋಟೆಲ್‌ನಿಂದ ಇನ್ನೊಂದಕ್ಕೆ ಎಷ್ಟು ಸಮಯ ಹೋಗುತ್ತೀರಿ? ಈ ಶಾಸಕರು ಮುಂದೊಂದು ದಿನ ತಮ್ಮ ವಿಧಾನಸಭಾ ಕ್ಷೇತ್ರಗಳಿಗೆ ಹೋಗಬೇಕಾಗುತ್ತದೆ. ಹೀಗಾದರೆ ಅವರು ಜನರನ್ನು ಹೇಗೆ ಎದುರಿಸುತ್ತಾರೆ ಎಂದು ಪ್ರಶ್ನಿಸಿದರು.

ಮುಂಬಯಿಯ ಮೆಟ್ರೋ ಕಾರ್ ಶೆಡ್ ಯೋಜನೆ ಕುರಿತಾಗಿ ಹೊಸ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಾನು ವಿನಮ್ರವಾಗಿ ಒತ್ತಾಯಿಸುತ್ತೇನೆ. ನಮ್ಮ ಮೇಲಿನ ದ್ವೇಷವನ್ನು ನಮ್ಮ ಪ್ರೀತಿಯ ಮುಂಬಯಿಯ ಮೇಲೆ ಹಾಕಬೇಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ : ಮೊದಲ ಪರೀಕ್ಷೆ ಗೆದ್ದ ಶಿಂಧೆ: ಹೊಸ ಸ್ಪೀಕರ್ ಆಗಿ ಬಿಜೆಪಿಯ ರಾಹುಲ್ ನಾರ್ವೇಕರ್ ಆಯ್ಕೆ

Advertisement

Udayavani is now on Telegram. Click here to join our channel and stay updated with the latest news.

Next