Advertisement

ಮೇ 13ರೊಳಗೆ ಇಲಾಖಾ ನೌಕರರ ಸಮಸ್ಯೆ ಇತ್ಯರ್ಥ: ಎಚ್‌.ಕೆ.ಪಾಟೀಲ್‌

03:45 AM Apr 23, 2017 | Team Udayavani |

ಮೈಸೂರು: ದೀರ್ಘ‌ ಕಾಲದಿಂದ ಬಾಕಿ ಉಳಿದಿರುವ ಇಲಾಖಾ ನೌಕರರು, ಸಿಬ್ಬಂದಿಯ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕಾಲಮಿತಿ ಹಾಕಿಕೊಳ್ಳಲಾಗಿದೆ. ರಾಜ್ಯ ಸರ್ಕಾರ ನಾಲ್ಕು ವರ್ಷ ಪೂರೈಸುವ (ಮೇ.13) ವೇಳೆಗೆ ನ್ಯಾಯಯುತ ಪರಿಹಾರ ಒದಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲಾಖೆಯ ಸಿಬ್ಬಂದಿ, ನೌಕರರು, ಕೂಲಿಕಾರರ ದೀರ್ಘ‌ ಕಾಲದಿಂದ ಬಾಕಿ ಉಳಿದಿರುವ ಸಮಸ್ಯೆಗಳ ಬಗ್ಗೆ ಮೇ 1 ರಿಂದ 6ರೊಳಗೆ ಎಲ್ಲಾ ಜಿಪಂ ಸಿಇಒಗಳು ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಲಿದ್ದಾರೆ. ಮೇ 10ರೊಳಗೆ ಸರ್ಕಾರ ನಿರ್ಣಯ ಕೈಗೊಂಡು ಮೇ 13ರೊಳಗೆ ಎಲ್ಲ ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ ಒದಗಿಸಲಾಗುವುದು. ಕನಿಷ್ಠ ವೇತನಕ್ಕೆ ಅರ್ಹರಾಗಿರುವ ಸಿಬ್ಬಂದಿಗೆ ಮೇ 1ರಿಂದ ಕಡ್ಡಾಯವಾಗಿ ಕನಿಷ್ಠ ವೇತನ ನೀಡಬೇಕು. ಇಲ್ಲವಾದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜಾರಿ ಮಾಡುವುದಾಗಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next