Advertisement

ಪ್ರಾಥಮಿಕ ಸಂಪರ್ಕಿತರು ನಾಪತ್ತೆ

04:51 PM May 31, 2020 | Team Udayavani |

ಕೊಪ್ಪಳ: ಪಿ-1173 ಜೊತೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಟಾಟಾ ಏಸ್‌ ಚಾಲಕ ಇನ್ನೂ ಜಿಲ್ಲಾಡಳಿತದ ಕೈಗೆ ಸಿಕ್ಕಿಲ್ಲ. ಆತನಿಗಾಗಿ ಜಿಲ್ಲಾಡಳಿತ ಹಗಲು ರಾತ್ರಿ ಹುಡುಕಾಟ ನಡೆಸುತ್ತಿದೆ.

Advertisement

ಟಾಟಾ ಏಸ್‌ ವಾಹನವು ಬಸ್‌ ನಿಲ್ದಾಣದಿಂದ ಗಂಜ್‌ ಕಡೆ ಪ್ರಯಾಣ ಮಾಡಿರುವ ಕುರಿತು ಖಾಸಗಿ ಮಾಲ್‌ಗ‌ಳಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಮುಂದೆ ಯಾವ ಕಡೆ ಪ್ರಯಾಣ ಮಾಡಿದೆ ಎನ್ನುವುದು ಜಿಲ್ಲಾಡಳಿತಕ್ಕೆ ತಿಳಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸುನೀಲ್‌ ಕುಮಾರ ಅವರು ಎಸ್‌ಪಿ ಜಿ. ಸಂಗೀತಾ ಅವರಿಗೆ ಪತ್ರ ಬರೆದು ಕೂಡಲೇ ಟಾಟಾ ಏಸ್‌ ವಾಹನವು ಯಾವ ಕಡೆ ಪ್ರಯಾಣ ಮಾಡಿದೆ ಎನ್ನುವ ಮಾಹಿತಿ ನೀಡುವಂತೆಯೂ ಕೇಳಿಕೊಂಡಿದ್ದಾರೆ. ಅಲ್ಲದೇ ಸದ್ಯ ನಗರದಲ್ಲಿನ ಸರ್ಕಾರಿ ಕೆಲ ಸಿಸಿ ಕ್ಯಾಮರಾಗಳೇ ಕೆಟ್ಟು ಹೋಗಿವೆ. ಹೀಗಾಗಿ ಜಿಲ್ಲಾಡಳಿತಕ್ಕೂ ಇದೊಂದು ದೊಡ್ಡ ಸಮಸ್ಯೆಯಾಗಿದೆ.

ಕೂಡಲೇ ಗದಗ ಭಾಗ ಹಾಗೂ ಮುನಿರಾಬಾದ್‌ ಭಾಗದಲ್ಲಿನ ಟೋಲ್‌ಗೇಟ್‌ನ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿ. ಅಲ್ಲಿ ವಾಹನ ಪ್ರಯಾಣ ಮಾಡಿದೆಯೇ ಎನ್ನುವ ಕುರಿತು ಮಾಹಿತಿ ನೀಡುವಂತೆಯೂ ಎಸ್‌ಪಿ ಅವರಿಗೆ ಕೇಳಿದ್ದಾರೆ. ಇನ್ನೂ ಕೊಪ್ಪಳದಿಂದ ಕೆಎಸ್‌ಆರ್‌ ಟಿಸಿ ಬಸ್‌ನಲ್ಲಿ ಕೊರೊನಾ ಸೋಂಕಿತನ ಜೊತೆಯಲ್ಲಿ ಕುಷ್ಟಗಿಗೆ ಪ್ರಯಾಣ ಬೆಳೆಸಿರುವ ವ್ಯಕ್ತಿಯು ಜಿಲ್ಲಾಡಳಿತದ ಸಂಪರ್ಕಕ್ಕೆ ಸಿಗುತ್ತಿಲ್ಲ. ಆತನಿಗಾಗಿ ಜಿಲ್ಲಾಡಳಿತ ಪ್ರಕಟಣೆಯನ್ನೂ ನೀಡಿ, ವ್ಯಕ್ತಿಯ ಪತ್ತೆಗೆ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next