Advertisement

ಕೇರಳದಲ್ಲಿ ದುರ್ಬಲಗೊಂಡ ಮಾರುತ ; ರಾಜ್ಯ ಕರಾವಳಿಗೆ ಮುಂಗಾರು ವಿಳಂಬ ಸಾಧ್ಯತೆ

10:37 AM Jun 04, 2020 | mahesh |

ಮಂಗಳೂರು: ಕೇರಳ ಕರಾವಳಿ ಭಾಗಕ್ಕೆ ಸೋಮವಾರ ಅಪ್ಪಳಿಸಿದ ಮುಂಗಾರು ದುರ್ಬಲಗೊಂಡ ಪರಿಣಾಮ ಕರಾವಳಿ ಭಾಗಕ್ಕೆ ಮುಂಗಾರು ಅಪ್ಪಳಿಸುವುದು ತಡವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದಲ್ಲಿ ಮಳೆ ತೀವ್ರತೆ ಕಡಿಮೆಯಾಗಿದೆ. ಇದೇ ಕಾರಣಕ್ಕೆ ಗುರುವಾರ ಅಥವಾ ಶುಕ್ರವಾರ ರಾಜ್ಯ ಕರಾವಳಿ ಭಾಗಕ್ಕೆ ಮುಂಗಾರು ಪ್ರವೇಶ ಪಡೆಯುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಗುರುವಾರ “ಆರೆಂಜ್‌ ಅಲರ್ಟ್‌’ ಘೋಷಣೆ ಮಾಡಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಇದೆ. ನಿಸರ್ಗ ಚಂಡಮಾರುತದ ಪರಿಣಾಮ ರಾಜ್ಯ ಕರಾವಳಿ ಪ್ರದೇಶಕ್ಕೆ ಬೀರುವ ಸಾಧ್ಯತೆ ಕಡಿಮೆ ಎಂದು ಹೇಳುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು.

Advertisement

ಮಳೆ ಪ್ರಮಾಣ ಇಳಿಕೆ
ಕಳೆದ 2 ದಿನಗಳಿಂದ ಜಿಲ್ಲೆಯಲ್ಲಿ ಸುರಿ ಯುತ್ತಿದ್ದ ಮಳೆ ಪ್ರಮಾಣ ಬುಧವಾರ ತುಸು ಇಳಿಕೆ ಕಂಡಿದೆ. ಮಂಗಳೂರು ನಗರದಲ್ಲಿ ಬುಧವಾರ ಬೆಳಗ್ಗಿನ ಜಾವ ಮತ್ತು ರಾತ್ರಿ ವೇಳೆ ಉತ್ತಮ ಗಾಳಿ-ಮಳೆಯಾಗಿತ್ತು.

ಉಡುಪಿ ಜಿಲ್ಲೆಯ ವಿವಿಧೆಡೆ ಹಗುರ ಮಳೆ
ಉಡುಪಿ: ಜಿಲ್ಲೆಯ ವಿವಿಧೆಡೆಗಳಲ್ಲಿ ಬುಧವಾರ ಸಂಜೆ ವೇಳೆಗೆ ಸಾಧಾರಣ ಗಾಳಿ-ಮಳೆಯಾಗಿದೆ. ಬೆಳಗ್ಗೆ ಕೆಲವೆಡೆ ತುಂತುರು ಮಳೆಯಾಗಿತ್ತು. ದಿನವಿಡಿ ಮೋಡದ ವಾತಾವರಣವಿತ್ತು. ಸಂಜೆ ವೇಳೆಗೆ ಉಡುಪಿ, ಕುಂದಾಪುರ, ಬ್ರಹ್ಮಾವರ, ಹೆಬ್ರಿ, ಕಾಪು ಸಹಿತ ಹಲವು ಭಾಗಗಳಲ್ಲಿ ಕೆಲವು ಹೊತ್ತು ಮಳೆ ಸುರಿದಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಕಾಸರಗೋಡು ಜಿಲ್ಲೆಯಲ್ಲಿ ಮಳೆ
ಕಾಸರಗೋಡು: ಜಿಲ್ಲೆಯ ಬಹುತೇಕ ಕಡೆ ಬುಧವಾರ ಗಾಳಿ-ಮಳೆಯಾಗಿದೆ. ಕಾಸರ ಗೋಡು ಹೈಯರ್‌ ಸೆಕೆಂಡರಿ ಶಾಲೆ ಮೇಲೆ ಮರ ಬಿದ್ದು ವಾಟರ್‌ ಟ್ಯಾಂಕ್‌ ನಾಶಗೊಂಡಿದೆ. ಕಟ್ಟಡಕ್ಕೂ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next