Advertisement

ಪುಂಡಾನೆಗಳ ಪಳಗಿಸೋ ಏಕೈಕ ಶಿಬಿರ

01:06 PM Jun 19, 2017 | |

ಹುಣಸೂರು: ಎಂತಹ ಪುಂಡಾನೆಗಳಾದರೂ ಹೆಡೆಮುರಿಕಟ್ಟಿ ಪಳಗಿಸಲೂ ಸೈ ಎನಿಸಿರುವ ಇಲ್ಲಿನ ಮಾವುತರು-ಕವಾಡಿಗಳು ಇದೀಗ ಏಳು ಮಂದಿಯನ್ನು ಬಲಿ ಪಡೆದಿದ್ದ ಮದಗಜ ಹಾಗೂ ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ಸಲಗವನ್ನು ಸಲಹುವ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಇದೀಗ ಮಾವುತರ ಸಂಜ್ಞೆ(ಆದೇಶ)ಯನ್ನು ಕರಗತ ಮಾಡಿಕೊಂಡಿರುವ ಸಲಗ ಸಂಜ್ಞೆಗೆ ತಕ್ಕ ಹೆಜ್ಜೆ ಹಾಕುತ್ತಿದ್ದರೆ, ಮತ್ತೂಂದು ಕ್ರಾಲ್ನಲ್ಲೇ ಪಳಗಿಸಲಾಗುತ್ತಿದೆ.

Advertisement

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಅಂಡೆ ಕುರುಬನದೊಡ್ಡಿಯಲ್ಲಿ ಸುಮಾರು 45 ವರ್ಷದ ಮದಗಜವನ್ನು 2016ರ ನವಂಬರ್‌ 10 ರಂದು ಸೆರೆ ಹಿಡಿದು ತಂದು ಪಳಗಿಸಿ ಹೇಳಿದಂತೆ ಕೇಳುವಂತೆ ಮಾಡುವಲ್ಲಿ ಯಶಕಂಡಿದ್ದಾರೆ.

ಇನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೈರಾಪುರ ಗಸ್ತಿನ ಸುತ್ತಮುತ್ತಲಿನ ಕಾಫಿ ಎಸ್ಟೇಟ್‌ಗಳಲ್ಲಿ ಉಪಟಳ ನೀಡುತ್ತಿದ್ದ ಸುಮಾರು 30 ವರ್ಷದ ಗಂಡಾನೆಯನ್ನು 2017 ಮಾ.17 ಸೆರೆ ಹಿಡಿದು ತರಲಾಗಿತ್ತು. ಅಂದಿನಿಂದಲೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡುವಲಯದ ಕಂಠಾಪುರ ಆನೆಗಳ ಪಾಠ (ಕ್ರಾಲ್‌)ಶಾಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ತರಬೇತಿ ನೀಡಲಾಗುತ್ತಿದ್ದು, ಇದಕ್ಕೆ ಪ್ರೀತಿಯಿಂದ ರಾಮಯ್ಯನೆಂದು ನಾಮಕರಣ ಮಾಡಲಾಗಿದೆ.

ಕೊಳ್ಳೆಗಾಲ ಸುತ್ತಮುತ್ತಲಿನ ಕಾಡಂಚಿನಲ್ಲಿ 7 ಮಂದಿ ಬಲಿಪಡೆದಿದ್ದ ಮದಗಜಕ್ಕೆ ಮಾವುತ ವಸಂತ ಹಾಗೂ ಕವಾಡಿ ರವಿ ಅಂಕುಶ ಹಿಡಿದು ಕಾಡಿನೊಳಗೆ ಅಡ್ಡಾಡುವ ಪಾಠ ಹೇಳಿಕೊಡುತ್ತಿದ್ದರೆ. ಮೂಡಿಗೆರೆ ಎಸ್ಟೇಟ್‌ಗಳಲ್ಲಿ ಉಪಟಳ ನೀಡುತ್ತಿದ್ದ ಗಂಡಾನೆಗೆ ಮಾವುತ ಲಿಂಗಪ್ಪ, ಕವಾಡಿ ರಾಮು  ಕ್ರಾಲ್‌ನೊಳಗೆ ಬಂಧಿಸಿ, ಪಾಠ ಹೇಳಿಕೊಡುತ್ತಿದ್ದು, ಆಗಾಗ್ಗೆ  àಳಿಡುತ್ತಾ, ನೋಡಲು ಬಂದವರತ್ತ ಕಾಲಕೆಳಗಿನ ಮಣ್ಣನ್ನು ಸೊಂಡಲಿನಿಂದ ಎರಚುತ್ತಾ, ನಿಧಾನವಾಗಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿವೆ.

ಏನಿದು ಕ್ರಾಲ್‌: ಮಾನವನ ಪ್ರಾಣ, ಆಸ್ತಿ-ಪಾಸ್ತಿಗಳಿಗೆ ಹಾನಿಯಾದಾಗ ಅಂತಹ ಮದಗಜಗಳನ್ನು ಸೆರೆ ಹಿಡಿದು, ಸಾಕಾನೆ ಶಿಬಿರಗಳಿಗೆ ತಂದು ಹೊರ ಬಿಡುವುದಕ್ಕೂ ಮುನ್ನ ಒಂದೇ ಸಮನಾದ ಗುಣಮಟ್ಟದ ಮರಗಳಿಂದ ತಯಾರಿಸಲಾಗಿರುವ ಉದ್ದನೆಯ ಪೋಲ್ಸ್‌ಗಳನ್ನು (ಗೇಟ್‌ ಮಾದರಿಯಲ್ಲಿ) ಪೇರಿಸಿ ಅದರೊಳಗೆ ಪುಂಡಾಟ ನಡೆಸಿದ್ದ ಆನೆಗಳನ್ನು ಕೂಡಿ ಹಾಕುವುದೇ ಕ್ರಾಲ್‌. ಮಾವುತರು-ಕವಾಡಿಗಳು ಆನೆಗಳು ಕ್ರಾಲ್‌ನೊಳಗೆ ನಿಂತಲ್ಲಿಯೇ ಇಂತಹ ಆನೆಗಳಿಗೆ ಆಹಾರ ನೀಡುತ್ತಾರೆ, ಇದೊಂತರ ಮನುಷ್ಯರನ್ನು ಕೂಡಿ ಹಾಕುವ ಬಂಧಿಖಾನೆ ಇದ್ದಂತೆ.

Advertisement

ನಿತ್ಯದ ಆಹಾರ: ವಿವಿಧ ಜಾತಿಯ ಮರಗಳ ಸೊಪ್ಪು, ನೀರು, ಜೊತೆಗೆ ಹುರಳಿ, ಕುಸಬಲಕ್ಕಿ, ಬೆಲ್ಲ, ರುಚಿಗೆತಕ್ಕ ಉಪ್ಪು ಸೇರಿಸಿ ಉಂಡೆಕಟ್ಟಿ ನೀಡುವುದು, ಇದರೊಂದಿಗೆ ಭತ್ತವನ್ನು ಹುಲ್ಲಿನೊಂದಿಗೆ ಕುಸರೆ(ಉಂಡೆ) ಕಟ್ಟಿ ಮಿತ‌ವಾಗಿ ನೀಡಲಾಗುತ್ತದೆ. ಆದರೆ ಇದೇ ಮಾದರಿಯಲ್ಲೇ ಸಾಕಾನೆಗಳು ದೈನಂದಿನ ಆಹಾರದೊಂದಿಗೆ ಕವಾಡಿ ಮಾವುತರೊಂದಿಗೆ ಕಾಡಿನೊಳಕ್ಕೆ ತೆರಳುವುದರಿಂದ ಅಲ್ಲಿ ಮೇಯ್ದು ಮತ್ತಷ್ಟು ಸೊಪ್ಪನ್ನು ಹೊತ್ತು ತರುವುದರಿಂದ ಪ್ರತಿನಿತ್ಯ ಕನಿಷ್ಠ 300-400 ಕೆಜಿಯಷ್ಟು ವಿವಿಧ ಜಾತಿಯ ಸೊಪ್ಪನ್ನು ತಿನ್ನುತ್ತವೆ.

ಒಂದಕ್ಕೆ ಬಿಡುಗಡೆ, ಮತ್ತೂಂದಕ್ಕೆ ಕೈಲು(ಕ್ರಾಲ್‌)ವಾಸ: ಕಳೆದ ಆರು ತಿಂಗಳಹಿಂದೆ ಕ್ರಾಲ್‌ನೊಳಗಿದ್ದ ಮದಗಜ ಇದೀಗ ತನ್ನ ಕೋಪ-ತಾಪವನ್ನು ನಿಗ್ರಹಿಸಿಕೊಂಡಿದ್ದರಿಂದ ಕ್ರಾಲ್‌ನಿಂದ ಹೊರಕ್ಕೆ ಬಿಟ್ಟು ಕಾಲಿಗೆ ಸರಪಳಿ ಹಾಕಿ ಶಿಬಿರದಲ್ಲಿ ಮಾವುತ-ಕವಾಡಿಗಳು ಅಂಕುಶಹಿಡಿದು ಅತ್ತಿಂದಿತ್ತ ಓಡಾಡಿಸುತ್ತಿದ್ದರೆ, ಮತ್ತೂಂದು ಗಂಡಾನೆಯನ್ನು ಇನ್ನೂ ಕ್ರಾಲ್‌ನೊಳಗಿಟ್ಟು ಮಿತ ಆಹಾರ ನೀಡಿ ಹೇಳಿದಂತೆ ಕೇಳಲು ಮಾಡಲು ಶ್ರಮ ಹಾಕಲಾಗುತ್ತದೆ.

ತಿಂಗಳ ಮರಿ: ಇದೀಗ ಮತ್ತಿಗೋಡು ವಲಯದ ಕಂಠಾಪುರ ಸಾಕಾನೆ ಶಿಬಿರದಲ್ಲಿ ಅಂತರಸಂತೆ ವಲಯದಲ್ಲಿ ತಾಯಿಯಿಂದ ಬೇರ್ಪಟ್ಟು ಅರಣ್ಯದಂಚಿನಲ್ಲಿ ತಾಯಿಗಾಗಿ ಹಂಬಲಿಸುತ್ತಿದ್ದ ಎರಡು ತಿಂಗಳ ಹಾಲು ಕುಡಿಯುವ ಮರಿಯಾನೆಯಿಂದ ಹಿಡಿದು ವಿಶ್ವ ವಿಖ್ಯಾತ ದಸರಾ ಜಂಬೂಸವಾರಿಗೆ ತೆರಳುವ ಸಾಕಾನೆಗಳಿಗೂ ಇಲ್ಲಿಯೇ ಆಶ್ರಯ ನೀಡಲಾಗಿದೆ.

ಶಿಬಿರದಲ್ಲಿ ಒಟ್ಟು 36 ಆನೆಗಳಿವೆ. ಇದರೊಂದಿಗೆ ಇತ್ತಿಚೆಗೆ ತಂದ ಆನೆ (ರಾಮಯ್ಯ) ಹಾಗೂ ಕೊಳ್ಳೆಗಾಲದ ಬಳಿ ಸೆರೆಸಿಕ್ಕ ಆನೆ ಸೇರಿ ಆನೆಗಳ ಸಂಖ್ಯೆ 38ಕ್ಕೇರಲಿದ್ದು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿವೆ.
-ಕಿರಣ್‌ಕುಮಾರ್‌, ವಲಯ ಅರಣ್ಯಾಧಿಕಾರಿ ಮತ್ತಿಗೋಡು ವಲಯ.

* ಸಂಪತ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next